Select Page

ಮತ್ತೊಮ್ಮೆ ದೆಹಲಿಗೆ ಹಾರಿದ ಸಾಹುಕಾರ್ – ವಿರೋಧಿಗಳ ವಿರುದ್ಧ ಮಹಾ ಅಸ್ತ್ರಕ್ಕೆ ಸಜ್ಜು?

ಮತ್ತೊಮ್ಮೆ ದೆಹಲಿಗೆ ಹಾರಿದ ಸಾಹುಕಾರ್ – ವಿರೋಧಿಗಳ ವಿರುದ್ಧ ಮಹಾ ಅಸ್ತ್ರಕ್ಕೆ ಸಜ್ಜು?

ಬೆಳಗಾವಿ : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ತಮ್ಮ ಆಪ್ತರ ಜೊತೆ ದೇಹಲಿಗೆ ತೆರಳಿದ್ದು ಹೈಕಮಾಂಡ್ ಭೇಟಿಮಾಡುವ ಸಾಧ್ಯತೆ ದಟ್ಟವಾಗಿದೆ.

ಹೌದು ಕಳೆದ ಕೆಲವು ದಿನಗಳಿಂದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಸಧ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹುಕಾರ್ ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ.

ಬುಧವಾರ ರಮೇಶ್ ಜಾರಕಿಹೊಳಿ ತಮ್ಮ ಆಪ್ತರ ಜೊತೆಗೂಡಿ ದೇಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಜೊತೆಗೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆ ಇರುವುದಾಗಿ ಹೇಳಿದ್ದು ಈ ಕುರಿತು ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಬಹುದು ಎನ್ನಲಾಗುತ್ತಿದೆ.

ಈ ಬಾರಿ ಸಾಹುಕಾರ್ ದೇಹಲಿ ಭೇಟಿಯಿಂದ ರಾಜ್ಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದೆ ಎನ್ನಲಾಗುತ್ತಿದೆ. ತಮ್ಮ‌ ಬಳಿ ಇರುವ ಮಹತ್ವದ ದಾಖಲೆಗಳಿಂದ ವಿರೋಧಿಗಳಿಗೆ ಸಂಕಷ್ಟ ತಂದೊಡ್ಡಬಹುದು ಎನ್ನಲಾಗುತ್ತಿದೆ.

Advertisement

Leave a reply

Your email address will not be published. Required fields are marked *