
ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟ ; ಇಬ್ಬರು ಸ್ಪರ್ಧಿಗಳು ಹೊರಕ್ಕೆ….?

ಬೆಂಗಳೂರು : ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಹೊಡೆದಾಟ ನಡೆದಿದ್ದು ಇಬ್ಬರನ್ನು ಆಯೋಜಕರು ಹೊರ ಹಾಕಿರುವ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಹೌದು ಸಧ್ಯ ಕನ್ನಡ ಬಿಗ್ ಬಾಸ್ ಶೋ ನಲ್ಲಿ ಜಗಳಗಳು ಜೋರಾಗಿವೆ. ವಕೀಲ ಜಗದೀಶ್ ಬಿಗ್ ಬಾಸ್ ಮನೆಯಲ್ಲೂ ಹೆಚ್ಚು ಸೌಂಡ್ ಮಾಡುತ್ತಿದ್ದರು. ಹಾಗೆಯೇ ಇವರ ವಿರುದ್ಧ ಇಡೀ ಮನೆಯೇ ತಿರುಗಿ ಬಿದ್ದಿತ್ತು.
ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ನಡುವೆ ಜಗಳ ಉಂಟಾಗಿದ್ದು ಇಬ್ಬರುನ್ನು ಬಿಗ್ ಬಾಸ್ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ ಬಿಗ್ ಬಾಸ್ ಆಯೋಜಕರು ಹೊಡೆದಾಟದ ವಿಷಯವಾಗಿ ಯಾವುದೇ ಮಾಹಿತಿ ನೀಡಿಲ್ಲ.
Bigg Boss Kannada – 11 ಸೀಜನ್ ಪ್ರಾರಂಭವಾಗಿ ಕೇವಲ ಮೂರು ವಾರಕ್ಕೆ ಕಾಲಿಟ್ಟಿದೆ. ಇಷ್ಟರಲ್ಲೇ ಹೊಡೆದಾಟದಂತ ಪರಿಸ್ಥಿತಿ ಮನೆಯಲ್ಲಿ ನಿರ್ಮಾಣವಾಗಿದ್ದು ಹಲವು ಚರ್ಚೆಯನ್ನು ಹುಟ್ಟುಹಾಕಿದೆ.