Select Page

Advertisement

ಕುಂಭಮೇಳ‌ ಕಾಲ್ತುಳಿತ ; ಇಬ್ಬರು ಅಧಿಕಾರಿಗಳ ನೇಮಕ

ಕುಂಭಮೇಳ‌ ಕಾಲ್ತುಳಿತ ; ಇಬ್ಬರು ಅಧಿಕಾರಿಗಳ ನೇಮಕ
Advertisement

ಬೆಳಗಾವಿ : ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆ ಸಂಭವಿಸಿದ್ದು, ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಹಾಗೂ ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಅವರನ್ನು ನೇಮಕ‌ ಮಾಡಲಾಗಿದ್ದು, ಮೃತಪಟ್ಟ ಯಾತ್ರಾರ್ಥಿಗಳ ಮೃತದೇಹವನ್ನು ವಾಪಸ್ ತರಲು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ನಗರದ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ ( 44 ) , ಹಾಗೂ ಮಗಳು ಮೇಘಾ ಹತ್ತರವಾಠ (24). ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ (61), ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ (48) ಮೃತ ದುರ್ದೈವಿಗಳು.

ಬುಧವಾರ ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ ಪವಿತ್ರ ಸ್ನಾನ ಮಾಡಲು ತ್ರಿವೇಣಿ ಸಂಗಮದ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಸೆಕ್ಟರ್ 20 ರಲ್ಲಿ ಸಂಭವಿಸಿದ್ದ ಕಾಲ್ತುಳಿದಲ್ಲಿ‌ ನಾಲ್ವರು ಮೃತಪಟ್ಟಿದ್ದು ದೃಢವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!