
ಜಂಬಗಿ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಬೆಳಗಾವಿ : ಜಂಬಗಿ ಮಹಾವಿದ್ಯಾಲಯದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಕತಿ ಅರಣ್ಯ ವಲಯದ ಉಪವಲಯಾಧಿಕಾರಿ ಸಂಜಯ ಗಸ್ತಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಣೆ ಮಾಡಲಾಯಿತು.
ಮಂಗಳವಾರ ಜಂಬಗಿ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾಗವಿಹಿಸಿ ಮಾತನಾಡಿದ ಇವರು. ಪರಿಸರ ಇಡೀ ಭೂಮಂಡಲದ ಜೀವ ರಾಶಿಗೆ ಬದುಕು ಕೊಟ್ಟಿದೆ. ಮರ ಉಳಿಸಿ ಪ್ರಕೃತಿಯನ್ನು ಕಾಪಾಡಿಕೊಂಡು ಹೋಗಬೇಕಾದ ಹೊಣೆ ಎಲ್ಲರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ನಿಂದ ಪ್ರಕೃತಿಗೆ ಹಾನಿ ಉಂಟಾಗುತ್ತಿದೆ. ಜನ, ಜಾನುವಾರುಗಳಿಗೂ ಪ್ಲಾಸ್ಟಿಕ್ ಅಪಾಯ ನೀಡುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಸಮಾಜ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಆನಂದ ಜಯಗೌಡರ, ಬಸವರಾಜ ಹನಗಂಡಿ, ಕೃಷ್ಣಾ ಪಾಟೀಲ್, ಶಂಕರ ಮನವಾಡಿ, ಮಲ್ಲಿಕ್ ಖುದ್ದು, ರವಿ ಕಿಲಾರಿ, ಸಂಜಯ್ ಕುಲಗೋಡ, ಆನಂದ ಖೋತ್, ಪ್ರವೀಣ್ ಸಂಗೋಡಿ ಸೇರಿದಂತೆ ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.