Select Page

ವಿಟಿಯು 24 ನೇ ಘಟಿಕೋತ್ಸವ‌ ; ಶ್ರೀ ಮಧುಸೂಧನ್ ಸಾಯಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ

ವಿಟಿಯು 24 ನೇ ಘಟಿಕೋತ್ಸವ‌ ; ಶ್ರೀ ಮಧುಸೂಧನ್ ಸಾಯಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವವು ಜು.18 ರಂದು ಜ್ಚಾನ ಸಂಗಮ ಆವರಣದ ಎ.ಪಿ.ಜಿ. ಅಬ್ದುಲ ಕಲಾಂ ಸಭಾಂಗಣದಲ್ಲಿ ಮುಂಜಾನೆ 11.30 ಗಂಟೆಗೆ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ ತಿಳಿಸಿದರು.

ವಿಶ್ವವಿದ್ಯಾಲಯ ಅವರಣದ ಸೆನೆಟ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು.‌ ಜು.18 ರಂದು ನಡೆಯಲಿರುವ 24ನೇ ಘಟಿಕೊತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ವಹಿಸಲಿದ್ದಾರೆ. ಭಾರತೀಯ ವಿಜ್ಣಾನ ಮಂದಿರ (ಐ.ಐ.ಎಸ್ಸಿ) ನಿರ್ದೆಶಕರಾದ ಪ್ರೋ.ಗೋವಿಂದನ್ ರಂಗರಾಜನ್ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರದ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಧುಸೂಧನ್ ಸಾಯಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಸೊಮನಾಥ್, ಬೆಂಗಳೂರ ಇಂಟರನ್ಯಾಷನಲ್ ಏರ್ ಪೋರ್ಟ ಲಿ.ವ್ಯವಸ್ಥಾಪನಾ ನಿರ್ದೆಶಕರು ಹರಿ ಕೆ ಮರಾರ್ ಅವರುಗಳಿಗೆ ಡಾಕ್ಟರ್ ಆಫ್ ಸೈನ್ಸ ಗೌರವ ಪದವಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಬಿ.ಇ/ಬಿ.ಟೆಕ್ ವಿಭಾಗದಲ್ಲಿ ಅಟೋನೋಮಸ್ ಸೇರಿದಂತೆ 51,129 ವಿಧ್ಯಾರ್ಥಿಗಳಿಗೆ, ಬಿ.ಪ್ಲಾನ ವಿಭಾಗದಲ್ಲಿ 08, ಬಿ.ಆರ್ಚ ವಿಭಾಗದಲ್ಲಿ ಅಟಾನೋಮಸ್ ಸೇರಿದಂತೆ 1,138 ವಿಧ್ಯಾರ್ಥಿಗಳಿಗೆ ಹಾಗೂ ಸಂಶೋಧನಾ ವಿಭಾಗದಲ್ಲಿ 340 ಪದವಿಗಳನ್ನು ವಿತರಿಸಲಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ 24ನೇ ವಾರ್ಷಿಕ ಘಟಿಕೋತ್ಸವ ಆದಷ್ಟು ಬೇಗ ನಡೆಸಲಾಗುತ್ತಿದೆ‌. ವಿದ್ಯಾರ್ಥಿಗಳಿಗೆ ಶೀಘ್ರವೇ ಪ್ರಮಾಣ ಪತ್ರಗಳನ್ನು ವಿತರಿಸಲು ಕ್ರಮ ಜರುಗಿಸಲಾಗುತ್ತಿದೆ. ಪರೀಕ್ಷೆಗಳು ಜರುಗಿ ಮೂರು ಗಂಟೆಯೊಳಗೆ

ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶ ನೀಡಿರುವದು ದೇಶದಲ್ಲಿಯೇ ಪ್ರಥಮ. ಇದೇ ರೀತಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ ಎಂದು ಡಾ.ಎಸ್. ವಿದ್ಯಾಶಂಕರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಟಿ.ಎಸ್.ಶ್ರೀನಿವಾಸ, ಪ್ರೊ.ಬಿ.ಇ.ರಂಗಸ್ವಾಮಿ ಉಪಸ್ಥಿತರಿದ್ದರು.

ಚಿನ್ನದ ಪದಕ ವಿಜೇತರು

ಈ ಬಾರಿಯ ವಿಟಿಯು ಘಟಿಕೋತ್ಸವದಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ ಮಾಡಲಾಗುತ್ತಿದೆ. ಬೆಳಗಾವಿಯ ಕೆ.ಎಲ್.ಇ. ಡಾ. ಎಂ.ಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಾಜಿ ಕಾಲೇಜಿನ ವಿಧ್ಯಾರ್ಥಿ ಸಾಹಿಲ್ ಎಂ. ಸೋಮನಾಚೆಗೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 12 ಚಿನ್ನದ ಪದಕ.

ಬೆಂಗಳೂರಿನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಜಿ.ವಿಷ್ಣು ಪ್ರಿಯಾಗೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 10, ಬೆಂಗಳೂರಿನ ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿ ಕಾಲೇಜಿನ ರೇಷ್ಮಾ ಜಿ. ಅವರಿಗೆ 7,

ಬೆಂಗಳೂರಿನ ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿ ಕಾಲೇಜಿನ ಮೋಹನಕುಮಾರ ಎಲ್ ಅವರಿಗೆ 7, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಹೃತಿಕಾ ಜಿ. ಅವರಿಗೆ 7, ಬೆಂಗಳೂರಿನ ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಕೃತಿಕಾ ಸೆಂಥಿಲ್ ಅವರಿಗೆ 4, ಬೆಂಗಳೂರಿನ ಆರ್.ಎನ್.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಅನುಶ್ರೀ ಪಿ ಅವರಿಗೆ 4,

ಕೆ.ಜಿ.ಎಫ್. ನ ಡಾ.ಟಿ.ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಮಾಲತೇಶ ಎನ್ ಅವರಿಗೆ 2, ದಾವಣೆಗೆರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಜನನಿ ಡಿ. ಅವರಿಗೆ 2 ಹಾಗೂ ಮಂಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಸೌರವ ವಿ.ಇಂಗಲ್ ಅವರಿಗೆ 2 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!