Select Page

Athani : ಅಕ್ರಮ‌ ಮರಳು ಸಾಗಾಟಕ್ಕೆ ಪೊಲೀಸರಿಂದ ಬ್ರೇಕ್ : ಅಖಾಡಕ್ಕಿಳಿದ ಎಸ್ಪಿ ಡಾ.‌ ಸಂಜೀವ್ ಪಾಟೀಲ್

Athani : ಅಕ್ರಮ‌ ಮರಳು ಸಾಗಾಟಕ್ಕೆ ಪೊಲೀಸರಿಂದ ಬ್ರೇಕ್ : ಅಖಾಡಕ್ಕಿಳಿದ ಎಸ್ಪಿ ಡಾ.‌ ಸಂಜೀವ್ ಪಾಟೀಲ್

ಅಥಣಿ : ಕೃಷ್ಣಾ ನದಿಯಲ್ಲಿನ ಮರಳನ್ನು ತಗೆದು ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದು ಟ್ರ್ಯಾಕ್ಟರ್ ಸೇರಿದಂತೆ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಖುದ್ದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅಖಾಡಕ್ಕೆ ಇಳಿದಿದ್ದಾರೆ.

ಭಾನುವಾರ ಬೆಳಿಗ್ಗೆ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದವರ ಮೇಲೆ ಅಥಣಿ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿದ್ದು, 25 ಟ್ರಾಕರ್, 4 ಜೆಸಿಬಿ 1 ಹೈವಾ ವಾಹನ ವಶಕ್ಕೆ ಪಡೆದಿದ್ದಾರೆ.

ಹೌದು ನಿನ್ನೇ ತಡರಾತ್ರಿ ಅಥಣಿ ಭಾಗದ ಕೃಷ್ಣಾ ನದಿ ತೀರದಲ್ಲಿ ಮರಳು ಸಾಗಾಟದ ಕುರಿತು ಬೆಳಗಾವಿ ವಾಯ್ಸ್ ವರದಿ ಪ್ರಕಟಿಸಿತ್ತು. ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಅಕ್ರಮ ಮರಳು ಸಾಗಣೆ ಜೋರಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!