Select Page

ಅವನು ಮಹಾನ್ ನಾಯಕನಲ್ಲ ಸಿಡಿ ಶಿವು ; ಡಿಕೆಶಿ ವಿರುದ್ಧ ಗುಡುಗಿದ ಗೋಕಾಕ್ ಸಾಹುಕಾರ್

ಅವನು ಮಹಾನ್ ನಾಯಕನಲ್ಲ ಸಿಡಿ ಶಿವು ; ಡಿಕೆಶಿ ವಿರುದ್ಧ ಗುಡುಗಿದ ಗೋಕಾಕ್ ಸಾಹುಕಾರ್

ಬೆಳಗಾವಿ : ಡಿ.ಕೆ ಶಿವಕುಮಾರ ಹೆಸರನ್ನು ಮೊನ್ನೆ ದೆಹಲಿ ಭೇಟಿ ಸಂದರ್ಭದಲ್ಲಿ ಕುಮಾರಸ್ವಾಮಿ ಜೊತೆ ಸೇರಿ ಮರುನಾಮಕರಣ ಮಾಡಲಾಗಿದೆ. ಇನ್ಮುಂದೆ ಡಿಕೆಶಿ ಮಹಾನ್ ನಾಯಕನಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಗೋಕಾಕ್ ಪಟ್ಟಣದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಇವರು. ಮುಡಾ ಹಗರಣದಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡ ವಿಚಾರವಾಗಿ ಮಾತನಾಡಿದ ಇವರು. ಸಿಎಂ ಸಿದ್ದರಾಮಯ್ಯ ಬದಲಾವಣೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ.

ಆದರೆ ಮಹಾನ್ ನಾಯಕ ಡಿ.ಕೆ ಶಿವಕುಮಾರ್ ಗೆ ಮರು ನಾಮಕರಣ ಮಾಡಲಾಗಿದೆ. ಮೊನ್ನೆ ದೇಹಲಿಗೆ ಭೇಟಿ ನೀಡಿಸ ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೂ ನಾನು ಮರು ನಾಮಕರಣ ಮಾಡಿದ್ದು ಡಿಕೆಶಿ ಇನ್ಮುಂದೆ ಸಿಡಿ ಶಿವು ಎಂದು ಸಾಹುಕಾರ್ ವ್ಯಂಗ್ಯವಾಡಿದರು.

ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ಈಗಾಗಲೇ ಸದನದ ಒಳಗೆ ಸಾಕಷ್ಟು ಹೋರಾಟ ಮಾಡಿದ್ದೇವೆ. ಇದೊಂದು ದೊಡ್ಡ ಹಗರಣ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ನಿರ್ಧಾರ ಪಡೆದುಕೊಂಡು ಯತ್ನಾಳ್ ಜೊತೆ ಸೇರಿ ಪಾದಯಾತ್ರೆ ಮಾಡುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಗೋಕಾಕ್ ಪಟ್ಟಣದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯದಲ್ಲೇ ಅತ್ಯಂತ ದೊಡ್ಡ ಹಗರಣ. ದಲಿತರ ಹಣವನ್ನು ನುಂಗಿ ನೀರು ಕುಡಿಯಲಾಗಿದೆ. ಈ ಕುರಿತು ನಮ್ಮ ಹೋರಾಟ ಇನ್ನೂ ಹೆಚ್ಚಾಗಬೇಕಿತ್ತು. ಹೈಕಮಾಂಡ್ ನಿಂದ ಅನುಮತಿ ಪಡೆದು ಯತ್ನಾಳ್ ಹಾಗೂ ಇನ್ನೂ ಕೆಲ ನಾಯಕರ ಜೊತೆ ಸೇರಿ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತೇನೆ ಎಂದರು.‌

ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಕುರಿತು ವಿಪಕ್ಷವಾಗಿ ನಾವು ಧ್ವನಿ ಎತ್ತಿದ್ದೇವೆ. ಮೈಸೂರು ಪಾದಯಾತ್ರೆ ಮಾಡಲು ಹೋರಟಿದ್ದಾರೆ. ಆದರೆ ಅದಕ್ಕಿಂತ ದೊಡ್ಡ ಹಗರಣ ದಲಿತರ ಹಣ ನುಂಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಈ ಕುರಿತು ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದರು.

ಇನ್ನೂ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕ ರಮೇಶ್. ನಾನು ಅವರ ಜೊತೆ ಮಾತನಾಡಲ್ಲ. ಅವರು ರಾಜ್ಯಾಧ್ಯಕ್ಷನೆಂದು ಒಪ್ಪಿಕೊಂಡಿಲ್ಲ. ನಾನು ನೇರವಾಗಿ ನಮ್ಮ ಪಕ್ಷದ ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಹೊರತು ಯಾರ ಬಳಿಯೂ ಮಾತನಾಡಲ್ಲ ಎಂದರು.

Advertisement

Leave a reply

Your email address will not be published. Required fields are marked *

error: Content is protected !!