Select Page

ಸನಾತನಿ ಮುಸ್ಲಿಂ ಆಗಲು ಕುಂಭಮೇಳಕ್ಕೆ ಹೋಗುವೆ ; ನಾಜಿಯಾ ಇಲಾಹಿ

ಸನಾತನಿ ಮುಸ್ಲಿಂ ಆಗಲು ಕುಂಭಮೇಳಕ್ಕೆ ಹೋಗುವೆ ; ನಾಜಿಯಾ ಇಲಾಹಿ

ಬೆಳಗಾವಿ : ನಾನು 32 ವರ್ಷದಿಂದ ಮುಸ್ಲಿಂ ಆಗಿದ್ದೇನೆ. ಈಗ ಸನಾತನಿ ಮುಸ್ಲಿಂ ಆಗಲು ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಸನಾತನಿ ಆಗುತ್ತೇ‌ನೆ ಎಂದು ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ಹೇಳಿದರು.

ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಹಿಂದೂಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಇವರು. ಕಳೆದ 54 ವರ್ಷದಿಂದ ಹಿಂದೂಗಳು ಮಲಗಿದ್ದರು. ಈ ರೀತಿ ಹಿಂದೂ ಜಾಗೃತಿ ಸಭೆಗಳನ್ನು ಮಾಡಿ ಎಚ್ಚರಿಸುವ ಕಾರ್ಯ ನಡೆಯುತ್ತಿದೆ. ಇಂಥ ಜಾಗೃತಿ ಸಭೆಗಳಲ್ಲಿ ಭಾಗಿಯಾಗುತ್ತಿರುವುದು ನನ್ನ ಪುಣ್ಯ‌ ಎಂದರು.

ದೇಶದಲ್ಲಿ ಯಾವ ರೀತಿ ರಾಮ ನಾಮ ಜಪವಾಗುತ್ತಿದೆ ಅದೇ ರೀತಿ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ನೂರಾರು ವರ್ಷಗಳ ತಪ್ಪಸ್ಸು ಸಫಲವಾಯಿತು, ರಾಮ ಮಂದಿರ ನಿರ್ಮಾಣವಾಯಿತು ಎಂದು ಗರ್ವದಿಂದ ಹೇಳುತ್ತೇನೆ. ಗೋ ಹತ್ಯೆ ನಿಲ್ಲಬೇಕು. ಹಿಂದೂಗಳ‌ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು ಎಂದರು.

ವಕ್ಪ್ ಬೋಡ್೯ ಹೆಸರಿನಲ್ಲಿ ಭೂ ಮಾಫಿಯಾ ನಡೆಯುತ್ತಿದೆ. ಸಂವಿಧಾನದಲ್ಲಿ ವಕ್ಫ್ ಬೋಡ್೯ ಬಗ್ಗೆ ಉಲ್ಲೇಖ ಮಾಡಿಲ್ಲ. ಕೇಂದ್ರ ಸರಕಾರ ಮನಸ್ಸು ಮಾಡಿದರೆ ಬೇಕಾದನ್ನು ಮಾಡಬಹುದು. ಮುಸ್ಲಿಮ್ ಮಹಿಳೆಯರೇ ನಿಮ್ಮ ಗಂಡನಿಗೆ ತಲಾಖ್ ಕೊಟ್ಟು ಹಿಂದೂತ್ವಕ್ಕೆ ಮತಾಂತರವಾಗಿ ಬೇರೆ ಮದುವೆ ಮಾಡಿಸಿ ಹನಿಮೂನ್ ಗೆ ಕಳುಸುತ್ತೇವೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!