
ನಿಡಸೋಸಿ ಜಗದ್ಗುರುಗಳ ಕಾರು ಅಪಘಾತ : ಸ್ವಾಮೀಜಿ ಪ್ರಾಣಾಪಾಯದಿಂದ ಪಾರು

ಬೆಳಗಾವಿ : ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮಿಜಿ ಕಾರು ಅಪಘಾತವಾಗಿದ್ದು ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ದುರಡುಂಡೇಶ್ವರ ಮಠದ ಸ್ವಾಮೀಜಿ ಇವರಾಗಿದ್ದು , ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುವ ಮಾರ್ಗ ಮಧ್ಯೆ ತೇಗುರ ಬಳಿ ಅಪಘಾತವಾಗಿದ್ದು ಶ್ರೀಗಳು ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
