Select Page

Advertisement

ಅಥಣಿ‌ ಮೂಲದ ಪೊಲೀಸ್ ‌ಪೇದೆ ಆತ್ಮಹತ್ಯೆಗೆ ಶರಣು‌ ; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಅಥಣಿ‌ ಮೂಲದ ಪೊಲೀಸ್ ‌ಪೇದೆ ಆತ್ಮಹತ್ಯೆಗೆ ಶರಣು‌ ; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಬೆಳಗಾವಿ : ಬೆಂಗಳೂರಿನಲ್ಲಿ ಪೊಲೀಸ್ ‌ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಹಲವು ದಿನಗಳ ನಂತರ ಪತ್ತೆಯಾಗಿದೆ.

ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಮುಬಾರಕ್ ಮುಜಾವರ್ ( 28 ) ಮೃತ ದುರ್ದೈವಿ. ಕಳೆದ ಕೆಲ ವರ್ಷಗಳಿಂದ ಆಡುಗೋಡಿಯಲ್ಲಿ ಸಿಎಆರ್ ( ಸಿಟಿ ಆರ್ಮ್ ರಿಸರ್ವ್ ) ಪೊಲೀಸ್ ‌ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಯುವಕ ಇಂದು ಆಡುಗೋಡಿ ವ್ಯಾಪ್ತಿಯಲ್ಲಿ ನೇಣು ಬಿದಿಗ ಸ್ಥಿತಿಯಲ್ಲಿ ‌ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಇದ್ದು ಸುಮಾರು ದಿನಗಳ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತ ಪೊಲೀಸ್ ಪೇದೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸಾವಿಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

Advertisement

Leave a reply

Your email address will not be published. Required fields are marked *

error: Content is protected !!