ಬೆಳಗಾವಿ : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ಕುರಿತು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿ ವಿರುದ್ಧ ಪ್ರತಿಭಟನೆ ಕುರಿತು ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.

ಯಾವ ಅರ್ಥದಲ್ಲಿ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಅವರದು ಮಠ, ನಮ್ಮದು ಪಕ್ಷ. ಅವರಿಗೆ ಮನವಿ ಮಾಡುವೆ. ಈ ರೀತಿಯ ಹೋರಾಟ ಕೈಬಿಡುವಂತೆ ಎಂದರು.

ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಗೆ ಗೆ ಯತ್ನಾಳ್ ಏನು ಉತ್ತರ ನೀಡಿದ್ದಾರೆ‌‌ ಎಂಬುದು ಅವರಿಗೆ ಗೊತ್ತು. ಹೈಕಮಾಂಡ್ ತನ್ನ ನಿರ್ಧಾರ ಕೈಗೊಂಡಿದೆ. ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ‌ನೀಡಲಾರೆ ಎಂದು ಅಭಿಪ್ರಾಯಪಟ್ಟರು.