ಗಣೇಶ ಕಾಲ್ಪನಿಕ ದೇವರು ; ಸಾಣೇಹಳ್ಳಿ ಶ್ರೀ ವಿವಾದಾತ್ಮಕ ಹೇಳಿಕೆ
ಚಿತ್ರದುರ್ಗ : ಮನೆಗಳಲ್ಲಿ ಗಣೇಶನ ಪೂಜೆ ಮಾಡುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿ ಅಲ್ಲ. ಇದರ ಬದಲು ವಾಸ್ತವಕ್ಕೆ ತಕ್ಕ ವಚನಗಳನ್ನು ಹೇಳಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಗಣಪತಿ ಪೂಜೆ ಹಾಗೂ ಆರಾಧಿಸುವುದು ಮೌಢ್ಯದ ಆಚರಣೆ. ವಚನಗಳನ್ನು ಹೇಳುವುದೇ ನಿಜವಾದ ಆಚರಣೆ. ವಚನಗಳನ್ನು ಹಾಡಬಹುದು ಎಂದು ತಿಳಿಸಿದರವರೆ ಶಿವಕುಮಾರ ಸ್ವಾಮೀಜಿ ಎಂದು ಹೇಳಿದರು.
ಗಣೇಶನ ಪೂಜೆ ಮಾಡುವುದು ಆತ ಒಬ್ಬ ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳುವಳಿಯಲ್ಲಿ ನೆಪಮಾತ್ರಕ್ಕೆ ಹುಟ್ಟಿದ ದೇವರು. ಬಾಹ್ಯ ವಸ್ತುಗಳಿಂದ ಮಾಡಿದ ದೇವರು ದೇವರಲ್ಲ. ಗನಪತಿ ಸ್ತೋತ್ರ ಹೇಳುವ ಬದಲು ವಚನ ಹೇಳಬೇಕು ಎಂದರು.


