Select Page

ಅವಹೇಳನ ಮಾಡಿದವನಿಗೆ ಶಿಂಧೆ ಸೇನೆ ಪ್ರತ್ಯುತ್ತರ ; ಕಾಮ್ರಾಗೆ ವಾರ್ನಿಂಗ್

ಅವಹೇಳನ ಮಾಡಿದವನಿಗೆ ಶಿಂಧೆ ಸೇನೆ ಪ್ರತ್ಯುತ್ತರ ; ಕಾಮ್ರಾಗೆ ವಾರ್ನಿಂಗ್

ಮುಂಬೈ : ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಹಾಲಿ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾಗೆ ಶಿಂಧೆ ಸೇನೆ ಖಡಕ್ ಎಚ್ಚರಿಕೆ ನೀಡಿದೆ.

ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸ್ಟ್ಯಾಂಡ್ ಅಪ್ ಕಾಮಿಡಿಯಿನ್ ಕುನಾಲ್ ಕಾಮ್ರಾಗೆ ಶಿವಸೇನಾ ಯುವ ಸೇನಾ (ಶಿಂಧೆ ಬಣ) ಪ್ರಧಾನ ಕಾರ್ಯದರ್ಶಿ ರಾಹೂಲ್ ಕನಾಲ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಇದು ಕೇವಲ ಟ್ರೈಲರ್​ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ ಎಂದು ವಾರ್ನಿಂಗ್ ನೀಡಿದ್ದಾರೆ.

ಇದು ಯಾವುದೇ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿಲ್ಲ. ಇದು ಸಂಪೂರ್ಣವಾಗಿ ಸ್ವಾಭಿಮಾನಕ್ಕೆ ಸಂಬಂಧಿಸಿದೆ. ದೇಶದ ಹಿರಿಯರು ಅಥವಾ ಗಣ್ಯ ನಾಗರಿಕರ ವಿಷಯಕ್ಕೆ ಬಂದಾಗ. ಹಿರಿಯರನ್ನು ಗುರಿಯಾಗಿಸಿದಾಗ, ನೀವು ಅಂತಹ ಮನಸ್ಥಿತಿಯ ಯಾರನ್ನಾದರೂ ಗುರಿಯಾಗಿಸುತ್ತೀರಿ.

ಕುನಾಲ್ ಕಾಮ್ರಾಗೆ ಸಂದೇಶವು ಸ್ಪಷ್ಟವಾಗಿದೆ. ಇದು ಕೇವಲ ಟ್ರೈಲರ್​ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ. ಮುಂಬೈನಲ್ಲಿದ್ದಾಗಲೆಲ್ಲಾ ಶಿವಸೇನೆ ಶೈಲಿಯಲ್ಲಿ ನಿಮಗೆ ಒಳ್ಳೆಯ ಪಾಠ ಸಿಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕುನಾಲ್ ಕಾಮ್ರಾ ಮತ್ತು ಶಿವಸೇನೆಯ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾದ ನಂತರ, ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದ್ದಾರೆ.”ನಾವು ದೂರು ನೀಡಿದ್ದೇವೆ. ಹ್ಯಾಬಿಟಾಟ್ ಮಾಲೀಕರಿಗೆ ಕರೆ ಮಾಡಿ, ಈ

ಸ್ಥಳದ ವಿರುದ್ಧ ಈ ಹಿಂದೆ 6 ಎಫ್‌ಐಆರ್‌ ದಾಖಲಾಗಿರುವುದನ್ನು ಹೇಳಿದ್ದೇವೆ. ಕುನಾಲ್ ಕಮ್ರಾಗೆ ತಕ್ಕ ಪಾಠ ಕಲಿಸುತ್ತೇವೆ. ಇದು ಹಣ ಪಡೆದು ಮಾಡಿರುವ ಪಿತೂರಿಯಾಗಿದೆ. ಅದನ್ನು ಬಹಿರಂಗಪಡಿಸಲು ಮುಂಬೈ ಪೊಲೀಸರು ಸಮರ್ಥರಾಗಿದ್ದಾರೆ ಎಂದು ಕನಾಲ್ ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!