
ಹುಕ್ಕೇರಿಯಲ್ಲಿ ಮಹಾಯುದ್ಧ ; ಸಾಹುಕಾರರ ಬೆಂಬಲಿಗರ ವಾಗ್ವಾದ

ಹುಕ್ಕೇರಿ : ತೀವ್ರ ಕುತೂಹಲ ಮೂಡಿಸಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆ ಮತದಾನ ಪ್ರಾರಂಭವಾಗಿದೆ.
ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ 1 ರಿಂದ 67 ಮತಗಟ್ಟೆ, ಎಸ್.ಹೈಸ್ಕೂಲ, ಶಿಕ್ಷಣ ಸಂಸ್ಥೆ 68 ರಿಂದ 122 ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಈ ನಡುವೆ ಜಾರಕಿಹೊಳಿ ಹಾಗೂ ಕತ್ತಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ಮತಗಟ್ಟೆಗಳ ವೀಕ್ಷಣೆ ವೇಳೆ ಬೆಂಬಲಿಗರ ಮಧ್ಯೆ ಜೋರು ಗಲಾಟೆ ನಡೆದಿದ್ದು, ಪೊಲೀಸರ ಮಧ್ಯಪ್ರದೇಶದಿಂದ ಶಾಂತವಾಗಿದೆ.
ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೂ ಮತದಾನ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿದರು.