Select Page

BIGG BOSS : ತುಳಿದವರ ಮುಂದೆಯೇ ಗೆದ್ದು ಬೀಗಿದ ಹನುಮಂತ

BIGG BOSS : ತುಳಿದವರ ಮುಂದೆಯೇ ಗೆದ್ದು ಬೀಗಿದ ಹನುಮಂತ

ಬೆಂಗಳೂರು : BBK – 11 ರ ಫೈನಲ್ ಗೆ ಎರಡೇ ವಾರ ಬಾಕಿ ಇರುವ ಸಂದರ್ಭದಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ಮೂಲಕ ಒಬ್ಬ ಸ್ಪರ್ಧಿಯನ್ನು ಬಿಬ್ ಬಾಸ್ ನೇರವಾಗಿ ಫಿನಾಲೆಗೆ ಹೋಗುವ ಅವಕಾಶ ನೀಡಲಾಗಿತ್ತು. ಈ ಆಟದಲ್ಲಿ ಕೆಲ ಸ್ಪರ್ಧಿಗಳು ಟಾರ್ಗೆಟ್ ಮಾಡಿ ಹನುಮಂತ ಅವರನ್ನು ತುಳಿಯಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ.‌

ಟಿಕೆಟ್ ಟು ಫಿನಾಲೆ ಟಾಸ್ಕ್ ಒಂದರಲ್ಲಿ ಭಾರವಾದ ಬ್ಯಾಗ್ ಹಾಕುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಮನೆಯ ಕ್ಯಾಪ್ಟನ್ ರಜತ್ ಬೇಕಂತ ಹನುಮಂತ ಅವರನ್ನು ಹೊರ ಹಾಕುವ ಉದ್ದೇಶದಿಂದ ಟಾರ್ಗೆಟ್ ಮಾಡಿ ರಜತ್ ಗೆಲುವಿಗೆ ಸಹಕಾರಿ ಆದರು ಎಂಬ ಆರೋಪವಿದೆ.

ಆದರೆ ಮೋಸದ ಆಟಕ್ಕೆ ತಲೆಕೆಡಿಸಿಕೊಳ್ಳದ ಹನುಮಂತ ಭವ್ಯ ಹಾಗೂ ಮೋಕ್ಷಿತ ಅವರ ಜೊತೆ ಇದ್ದ ಟಾಸ್ಕ್ ಗೆದ್ದು ಟಿಕೆಟ್ ಟು ಫಿನಾಲೆ ತಲುಪಿದರು. ನಂತರ ನಡೆದ ಟಾಸ್ಕ್ ನಲ್ಲಿ ಗೆಲುವು ಸಾಧಿಸಿದ ಇವರು ಕೊನೆಗೂ ಫಿನಾಲೆ ವಾರ ತಲುಪಿದ್ದಾರೆ. ಜೊತೆಗೆ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗುವ ಮೂಲಕ ಗೆದ್ದು ಬೀಗಿದ್ದಾರೆ.

ಮೊದಲು ಕ್ಯಾಪ್ಟನ್‌ ರಜತ್‌ ಐವರಿಗೆ ‘ಟಿಕೆಟ್‌ ಟು ಹೋಮ್‌’ ನೀಡಬೇಕಿತ್ತು. ‘ಟಿಕೆಟ್‌ ಟು ಹೋಮ್’ ಪಡೆದ ಐವರಿಗೆ ಚೆಂಡಿನ ಟಾಸ್ಕ್ ಕೊಡಲಾಯ್ತು. ಒಂದೊಂದು ಸುತ್ತಿನಲ್ಲಿ ಗೆದ್ದವರು, ಸುರಕ್ಷಿತ ಪ್ರದೇಶಕ್ಕೆ ಹೋಗ್ಬೇಕಿತ್ತು. ಸುರಕ್ಷಿತ ಪ್ರದೇಶದಲ್ಲಿದ್ದ ಒಬ್ಬರು ಅಸುರಕ್ಷಿತ ಪ್ರದೇಶಕ್ಕೆ ಬರ್ಬೇಕಿತ್ತು.

ಐದನೇ ಸುತ್ತಿನ ಅಂತ್ಯಕ್ಕೆ ಯಾವ ಐವರು ಅಸುರಕ್ಷಿತ ಪ್ರದೇಶದಲ್ಲಿ ಇರ್ತಾರೋ.. ಅವರು ನಾಮಿನೇಟ್ ಆದಂತೆ. ಈ ಟಾಸ್ಕ್‌ ಅನುಸಾರ.. ತ್ರಿವಿಕ್ರಮ್‌, ಭವ್ಯಾ ಗೌಡ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ಧನರಾಜ್‌ ನಾಮಿನೇಟ್ ಆದರು. ಸುರಕ್ಷಿತ ಪ್ರದೇಶದಲ್ಲಿದ್ದ ಮಂಜು, ಗೌತಮಿ ಜಾಧವ್ ಹಾಗೂ ಹನುಮಂತ ಲಮಾಣಿ ಸೇಫ್‌ ಆದರು.

Advertisement

Leave a reply

Your email address will not be published. Required fields are marked *

error: Content is protected !!