ಬೆಂಗಳೂರು : ಡಿ.ಕೆ ಸಂಪುಟದಲ್ಲಿ ‌ಸಚಿವಸ್ಥಾನದ ಆಸೆ ಹೊಂದಿದ್ದ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರಿಗೆ ನಿರಾಸೆಯಾಗಿದ್ದು ಅಸಮಾಧಾನದ ಅಲೆ ಸ್ಪೋಟಗೊಂಡಿದೆ.‌

ಮೈಸೂರಿನ ನರಸಿಂಹರಾಜ‌ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವಸ್ಥಾನ ‌ಕೈ ತಪ್ಪಿದ್ದು ರಾಜೀನಾಮೆ ‌ಕೊಡುವ ಕುರಿತು ಚಿಂತನೆ ನಡೆಸಿದ್ದೇನೆ ಎಂದರು.

ಇನ್ನುಳಿದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಮುದ್ದೇಬಿಹಾಳ ಶಾಸಕ ಅಪ್ಪಾಜಿ‌ ‌ನಾಡಗೌಡ ಸೇರಿದಂತೆ ‌ಇನ್ನುಳಿದ ಕೆಲ ಶಾಸಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ‌ನೀಡಲು ಸಜ್ಜಾಗಿದ್ದಾರೆ.