Select Page

ಅಜ್ಜಿಯ ಆಸ್ತಿ ಬಿಡದ ಕಿರಾತಕ ; ಅಧಿಕಾರಿಗಳಿಗೆ ದಯವಿಟ್ಟು ನ್ಯಾಯ ಕೊಡಿಸಿ

ಅಜ್ಜಿಯ ಆಸ್ತಿ ಬಿಡದ ಕಿರಾತಕ ; ಅಧಿಕಾರಿಗಳಿಗೆ ದಯವಿಟ್ಟು ನ್ಯಾಯ ಕೊಡಿಸಿ

ಬೆಳಗಾವಿ : ಮುಪ್ಪಿನ ವಯಸ್ಸಿನಲ್ಲಿ ಆಸರೆಯಾಗಬೇಕಿದ್ದ ಮಕ್ಕಳು ಇಲ್ಲ. ಮೊಮ್ಮಕ್ಕಳು ಇಲ್ಲ. ಗಂಡನನ್ನು ಕಳೆದುಕೊಂಡಿರುವ ಅಜ್ಜಿ ತಾನು ಸಂಪಾದನೆ ಮಾಡಿದ ಹಣದಿಂದ ಎರಡೂ ಗುಂಟೆ ಜಾಗೆ ಪಡೆದು, ಒಂದು ಗುಂಟೆಯಲ್ಲಿ ಮನೆ ನಿರ್ಮಾಣ ಮಾಡಿದ್ದಾಳೆ.

ಆ ಮನೆ ಹಾಗೂ ಜಾಗೆಯನ್ನು ಅಜ್ಜಿಗೆ ಮೋಸ ಮಾಡಿ ತನ್ನ ಹೆಸರಿಗೆ ಬರೆಸಿಕೊಂಡು ಮಠ ಸೇರುವಂತೆ ಮಾಡಿದ ಖದೀಮನಿಗೆ ತಕ್ಕ ಶಿಕ್ಷೆಯಾಗಬೇಕೆಂದು ವೃದ್ಧೆ ಶಾಂತಾ ಸುದ್ದಿಗಾರರ ಮುಂದೆ ಕಣ್ಣೀರು ಹಾಕಿ ಬೇಡಿಕೊಂಡಿದ್ದಾಳೆ.

ಗೋವಿಂದ್ ತಳವಾರ ಎಂಬ ವ್ಯಕ್ತಿ ನನಗೆ ಮೋಸ ಮಾಡಿ ನನ್ನ ಮನೆಯನ್ನು ಕಬ್ಜಾ ಮಾಡಿ ಲಕ್ಷಾಂತರ ರೂ‌. ವಂಚನೆ ಮಾಡಿದ್ದಾನೆ. ಕಾಕತಿಯ ಕಿಲ್ಲಾಗಲ್ಲಿಯಲ್ಲಿರುವ ಒಂದು ಗುಂಟೆಯ ಜಾಗೆಯಲ್ಲಿರುವ ಮನೆಯ ತೆರಿಗೆ ತುಂಬಿಲ್ಲ ಎಂದಿದ್ದ ಗೋವಿಂದ್ ಅಜ್ಜಿ ಕರ ತುಂಬುಲು ಕೊಟ್ಟಾಗ ಆ ದಾಖಲೆಯನ್ನು ಇಟ್ಟುಕೊಂಡು ಮೋಸ ಮಾಡಿದ್ದಾನೆ ಎಂದರು‌.

ಒಂದೇ ದಿನದಲ್ಲಿ ಕಾಕತಿಯ ಪಂಚಾಯಿತಿ ಅಧಿಕಾರಿಗಳು ಲಕ್ಷಾಂತರ ರೂ.ಗಳ ಬೆಲೆ ಬಾಳುವ ಮನೆ ಹಾಗೂ ಒಂದು ಗುಂಟೆ ಖಾಲಿ ಜಾಗೆಯನ್ನು ಮೋಸದಿಂದ ಬರೆದುಕೊಟ್ಟಿದ್ದಾರೆ. ಈಗ ನನಗೆ ಯಾರೂ ಇಲ್ಲ. ಹುಬ್ಬಳ್ಳಿಯ ಸಿದ್ದಾರೂಢಮ ಮಠದಲ್ಲಿ ಇದ್ದೇನೆ.

ನನಗೆ ಸುಮಾರು 6 ಲಕ್ಷದ ಚೆಕ್ ಕೊಟ್ಟಿರುವ ಗೋವಿಂದ್ ಅದರಲ್ಲಿ ಹಣ ಇಲ್ಲ. ನನಗೆ ಬೀದಿಗೆ ತಂದಿರುವ ಅವನಿಂದ ನನಗೆ ನನ್ನ ಮನೆ ಕೊಡಿಸಿ ಎಂದು ಅಜ್ಜಿ ಸುದ್ದಿಗಾರರ ಮುಂದೆ ಕಣ್ಣೀರು ಹಾಕಿ ಬೇಡಿಕೊಂಡರು.

Advertisement

Leave a reply

Your email address will not be published. Required fields are marked *

error: Content is protected !!