ವೀಡಿಯೊ ನೋಡಲು ಕೆಳಗಿನ‌ ಲಿಂಕ್ ಒತ್ತಿ 👇👇

https://fb.watch/kKM4s34zvp/?mibextid=Nif5oz

ಬೈಲಹೊಂಗಲ : ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನಲೆ ಎರಡು ಕುಟುಂಬಗಳ ಮಧ್ಯೆ ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಳ್ಳುವ ದೃಶ್ಯ ವೈರಲ್ ಆಗಿದೆ.

ಜಮೀನು ವಿವಾದ ಸಂಬಂಧಿಸಿದಂತೆ ಶಂಕರೆಪ್ಪ ಕುಂಬಾರ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.‌ ಈ ಸಂದರ್ಭದಲ್ಲಿ ಹೊಲದಲ್ಲಿ ಇದ್ದ ಸಾಗವಾನಿ ಮರ ಕಡಿದ ಕಾರಣಕ್ಕೆ ಮಹಾರುದ್ರಪ್ಪ ಕುಂಬಾರ ಎಂಬುವವರ ಮೇಲೆ‌ಮಾರಣಾಂತಿಕ‌ ಹಲ್ಲೆ ನಡೆಸಲಾಗಿದೆ.

ಹಲ್ಲೆ ಮಾಡಿದ್ದ ಆರೋಪಿ ಶಂಕರೆಪ್ಪ ಕುಂಬಾರ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.