ಅಥಣಿ : ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೈಕ್  ಸವಾರನಿಗೆ  ಬಿಜಿ ನಾಯಿಗಳು ಬೆನ್ನು ಹತ್ತಿದ ಹಿನ್ನೆಲೆಯಲ್ಲಿ  ಗಾಬರಿಗೊಂಡ ಬೈಕ್ ಸವಾರ ನಿಯಂತ್ರಣ ತಪ್ಪಿ  ಬೈಕ್ ಮನೆಯ ಗೋಡೆಗೆ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅಥಣಿ ಪಟ್ಟಣದ ಕುಂಬಾರ ಗಲ್ಲಿಯಲ್ಲಿ ಜರುಗಿದೆ.

 ಮೃತಪಟ್ಟ ದುರ್ದೈವಿಯನ್ನು  ವಿಶ್ವನಾಥ ಶಿರೋಳ(44) ಎಂದು ಗುರುತಿಸಲಾಗಿದ್ದು, ಅಥಣಿ ಪಟ್ಟಣದಲ್ಲಿ ಬೀದಿ ನಾಯಿಗಳ  ಉಪಟಳ ಹೆಚ್ಚಾಗಿದ್ದು, ಬೈಕ್ ಸವಾರರಿಗೆ, ಶಾಲಾ ಮಕ್ಕಳಿಗೆ ತೀವ್ರ ತೊಂದರೆ ಕೊಡುತ್ತಿವೆ.

ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ  ಅನೇಕ ಬಾರಿ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ತಾಲೂಕ ಆಡಳಿತ ಮತ್ತು ಜಿಲ್ಲಾಡಳಿತ  ಈ ಬೀದಿನಾಯಿಗಳ  ಹಾವಳಿಗೆ ಕಡಿವಾಣ ಹಾಕಬೇಕೆಂದು  ಪ್ರಜ್ಞಾವಂತ ನಾಗರಿಕರು ಅಗ್ರಹಿಸಿದ್ದಾರೆ.