ಅಥಣಿ : ಒಂದೇ ಗ್ರಾಮದ 7 ಯುವಕರು ಭಾರತೀಯ ಸೇನೆಗೆ ಆಯ್ಕೆ
ಅಥಣಿ : ಒಂದೇ ಗ್ರಾಮದ ಏಳು ಜನ ಯುವಕರು ಭಾರತೀಯ ಸೇನೆಯ ಅಗ್ನಿವೀರರಾಗಿ ಆಯ್ಕೆಯಾಗುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ 7 ಯುವಕರು ಭಾರತೀಯ ಸೇನೆಯ ಅಗ್ನಿಪಥ ಯೋಜನೆ ಭಾಗವಾದ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ಸುಶಾಂತ ಹನಗಂಡಿ, ಶ್ರೀಶೈಲ್ ಧರಿಗೌಡ, ಸಂತೋಷ್ ನಾಯಕ್, ಪ್ರಜ್ವಲ್ ಸನದಿ, ಸಚಿನ್ ಗುರವ, ತವನೇಶ್ ಬಸರಿಕೋಡಿ, ಶಾಂತಿನಾಥ ಪಡನಾಡ ಆಯ್ಕೆಯಾಗಿದ್ದಾರೆ.
ಯುವಕರ ಸಾಧನೆಗೆ ಗ್ರಾಮದ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆಯ್ಕೆಯಾದವರಿಗೆ ಸನ್ಮಾನಿಸಲಾಗಿದೆ.


