Select Page

Advertisement

ಗೋಕಾಕ್ ಸಾಹುಕಾರ್ ಜೆಡಿಎಸ್ ಸೇರ್ಪಡೆ : ಲಕ್ಷ್ಮಣ ಸವದಿ ತಿರುಗೇಟು..!

ಗೋಕಾಕ್ ಸಾಹುಕಾರ್ ಜೆಡಿಎಸ್ ಸೇರ್ಪಡೆ : ಲಕ್ಷ್ಮಣ ಸವದಿ ತಿರುಗೇಟು..!



ಬೆಳಗಾವಿ : ಲಕ್ಷ್ಮಣ ಸವದಿ ಬಿಜೆಪಿ ಸೇರಲು‌ ಯತ್ನಿಸುತ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಸ್ವತಃ ಲಕ್ಷ್ಮಣ ಸವದಿ ಭಾನುವಾರ ತಿರುಗೇಟು ನೀಡಿದ್ದಾರೆ.

ಕೆಲಸ ಇಲ್ಲದವರು ಈ ರೀತಿಯ ಹೇಳಿಕೆ ನೀಡುತ್ತಾರೆ. ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳುವವರೇ ಕೆಲವೇ ದಿನಗಳಲ್ಲಿ ‌ಜೆಡಿಎಸ್ ಸೇರುವ ಚಿಂತನೆಯಲ್ಲಿದ್ದಾರೆ ಎಂದು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.

ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ತಲೆ ಬುಡ ಇಲ್ಲದೆ ಹೇಳಿಕೆ ಕೊಡುವವರಿಗೆ ಉತ್ತರಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ನಲ್ಲಿನ ಒಳ ಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದರು.

ಲಕ್ಷ್ಮಣ ಸವದಿ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ವಿಚಾರ ಸಧ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ.

Advertisement

Leave a reply

Your email address will not be published. Required fields are marked *

error: Content is protected !!