ಪ್ರವಾಹ ಭೀತಿ ; ಜಾನುವಾರು ಸ್ಥಳಾಂತರ ಮಾಡುತ್ತಿರುವ ರೈತರು
ಚಿಕ್ಕೋಡಿ : ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಅಮದುವರಿದ ಪರಿಣಾಮ ದೂಧಗಂಗಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಯಕ್ಸಂಬಾದ ದತ್ತವಾಡ ರಸ್ತೆಯ ತೋಟಪಟ್ಟಿಯ ಜಾನುವಾರುಗಳನ್ನು ರೈತರು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲೂಕಿನ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ನೀರಿನ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ದೂಧಗಂಗಾ ನದಿಗಳಿಗೆ ನೀರು ಏರಿಕೆಯಾಗುತ್ತಿದೆ.ಇದರಿಂದ ಯಕ್ಸಂಬಾ ಪಟ್ಟಣದ ದಾನವಾಡ ರಸ್ತೆ ತೋಟಪಟ್ಟಿಯಲ್ಲಿ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.


