Select Page

Advertisement

ಕತ್ತಿ ಹೊಡೆತಕ್ಕೆ ಚೆಲ್ಲಾಪಿಲ್ಲಿಯಾದ ಜೊಲ್ಲೆ ; ಜಾರಕಿಹೊಳಿ‌ ಸಹೋದರರಿಗೆ ಹಿನ್ನಡೆ

ಕತ್ತಿ ಹೊಡೆತಕ್ಕೆ ಚೆಲ್ಲಾಪಿಲ್ಲಿಯಾದ ಜೊಲ್ಲೆ ; ಜಾರಕಿಹೊಳಿ‌ ಸಹೋದರರಿಗೆ ಹಿನ್ನಡೆ

ಬೆಳಗಾವಿ : ಮಾಜಿ ಸಂದರ ರಮೇಶ್ ಕತ್ತಿ ಕೊಟ್ಟ ಹೊಡೆತಕ್ಕೆ ಮಾಜಿ ಸಂಸದ ಅಣ್ಣಾಸಾಹೆಬ್ ಜೊಲ್ಲೆ‌ ಚಲ್ಲಾಪಿಲ್ಲಿಯಾಗಿದ್ದರೆ ಇತ್ತ ಜಾರಕಿಹೊಳಿ ಸಹೋದರರು ಹಿನ್ನಡೆ ಅನುಭವಿಸುವಂತಾಗಿದೆ.

ಹೌದು ತೀವ್ರ ಕುತೂಹಲ ಮೂಡಿಸಿದ್ದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಹದಿನೈದು ಸ್ಥಾನಗಳನ್ನೂ ಕತ್ತಿ ಬಣ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ತಡರಾತ್ರಿ ವರೆಗೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ ಪಾಟೀಲ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಚುನಾವಣೆಯನ್ನು ಪ್ರತಿಷ್ಠೆಯಿಂದ ತಗೆದುಕೊಂಡಿದ್ದ ಜಾರಕಿಹೊಳಿ ಸಹೋದರರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಇನ್ನೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮುಖಭಂಗ ಅನುಭವಿಸುವಂತಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!