Select Page

ಕರೆದು ಮಂತ್ರಿಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ : ಶಾಸಕ ರಾಜು ಕಾಗೆ

ಕರೆದು ಮಂತ್ರಿಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ : ಶಾಸಕ ರಾಜು ಕಾಗೆ



ಬೆಳಗಾವಿ : ನಾನಾಗಿ ಮಂತ್ರಿ ಸ್ಥಾನ ಕೇಳುವುದಿಲ್ಲ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನನ್ನ ಶಕ್ತಿ ಗಮನಿಸಿ ಸಚಿವಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.‌

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಎಲ್ಲಾ ಶಾಸಕರು ಸಚಿವಸ್ಥಾನ ಕೇಳುತ್ತಿದ್ದಾರೆ. ಎಲ್ಲರಿಗೂ ಕೊಡಲು ಸಾಧ್ಯವಿಲ್ಲ‌. ನನಗೆ ಮಂತ್ರಿ ಸ್ಥಾ‌ನ ಕೊಟ್ಟರೂ ಸಂತೋಷವಿದೆ, ಇಲ್ಲವಾದರೂ ಸಂತೋಷದಿಂದ ಇರುತ್ತೇನೆ ಎಂದರು.

ಶನಿವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವುದರ ಕುರಿತು ಪ್ರತಿಕ್ರಿಯೆ ನೀಡಿದ ಇವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಸಿ ಎಲ್ ಪಿ ಸಭೆಗೆ ಗೈರಾಗುವುದಾಗಿ ಪತ್ರ ಬರೆದಿರುವೆ. ಹತ್ತು ದಿನ ಬಿಟ್ಟು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!