Select Page

Advertisement

ಹವ್ಯಕ ಮಠಗಳ ಪರವಾಗಿ ಡಾ.ಕೋರೆಯವರಿಗೆ ಸನ್ಮಾನ

ಹವ್ಯಕ ಮಠಗಳ ಪರವಾಗಿ ಡಾ.ಕೋರೆಯವರಿಗೆ ಸನ್ಮಾನ

ಬೆಳಗಾವಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರನ್ನು ಹವ್ಯಕ ಮಠಗಳ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಶಿವಮೊಗ್ಗದ ರಾಮಚಂದ್ರಾಪುರ ಮಠಗಳ ಪರವಾಗಿ, ಮಠದಿಂದ ಕಳುಹಿಸಲಾಗಿದ್ದ ಶಾಲು ಹೊದೆಸಿ, ಪ್ರಸಾದ ನೀಡಿ ಸನ್ಮಾನಿಸಲಾಯಿತು.

ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹಾಗೂ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮಿಗಳು ಅಭಿನಂದನಾ ಪತ್ರ ಕಳುಹಿಸಿದ್ದು,
ಬೆಳಗಾವಿ ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಪರಮೇಶ್ವರ ಹೆಗಡೆ, ಗಣೇಶ ಹೆಗಡೆ, ಎಂ.ಕೆ.ಹೆಗಡೆ, ಎಂ.ಟಿ.ಹೆಗಡೆ ಹಾಗೂ ಸೀತಾರಾಮ ಭಾಗ್ವತ ಡಾ.ಕೋರೆಯವರಿಗೆ ಸಮರ್ಪಿಸಿದರು.

Advertisement

Leave a reply

Your email address will not be published. Required fields are marked *

error: Content is protected !!