ರಾಜೀನಾಮೆಗೆ ಸಿದ್ಧವಾದ ಮತ್ತೊಬ್ಬ ಸಚಿವ? ; ಮುನಿಯಪ್ಪ ಅಸಮಾಧಾನ..!
ಬೆಂಗಳೂರು : ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಈಗ ಮತ್ತೊಬ್ಬ ಸಚಿವ ಅಸಮಾಧಾನ ಹೊರ ಹಾಕಿದ್ದು ಸಿಎಂ ಡಿಕೆಶಿಗೆ ನುಂಗಲಾರದ ತುತ್ತಾಗಿದೆ.
ಹೌದು ನಗರಾಭಿವೃದ್ಧಿ ಖಾತೆ ನಿರೀಕ್ಷೆಯಲ್ಲಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಬೇಸರಿಸಿಕೊಂಡು ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಆಹಾರ ಸಚಿವ ಮುನಿಯಪ್ಪ ಬೇಸರದ ಮಾತನಾಡಿದ್ದಾರೆ.
ಹಿರಿಯ ಸಚಿವರಾದ ಕೆ.ಹೆಚ್ ಮುನಿಯಪ್ಪ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಕೊಟ್ಟಿರುವ ಆಹಾರ ಖಾತೆಯ ಬದಿಲಿಗೆ ಬೇರೆ ಖಾತೆ ನೀಡುವಂತೆ ಅಸಮಾಧಾನ ಹೊರಹಾಕಿದ್ದಾರೆ.
ಸಧ್ಯ ಡಿ.ಕೆ ಶಿವಕುಮಾರ್ ಸಂಪುಟದ ಹಿರಿಯ ಸವಿವರ ಅಸಮಾಧಾನ ಸರಕಾರಕ್ಕೆ ಸಾಕಷ್ಟು ಮುಜುಗರ ಉಂಟಾಗಿದೆ. ಇದರಿಂದ ಮುಂದೆ ಯಾವ ಬೆಳವಣಿಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.


