Select Page

Advertisement

ಅಥಣಿ :  ಹೆಂಡತಿ ಸಾವಿಗೆ ಮನನೊಂದು ಗಂಡ ಆತ್ಮಹತ್ಯೆ

ಅಥಣಿ :  ಹೆಂಡತಿ ಸಾವಿಗೆ ಮನನೊಂದು ಗಂಡ ಆತ್ಮಹತ್ಯೆ
Advertisement

ಅಥಣಿ : ಅನಾರೋಗ್ಯದಿಂದ ಕಳೆದ ಎರಡು ದಿಮಗಳ ಹಿಂದೆ ಮಹಿಳೆ ಸಾವನಪ್ಪಿದ್ದಕ್ಕೆ ಮನನೊಂದು ಗಂಡ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ.

ಹೌದು ಕಳೆದ ಎರಡು ದಿನಗಳ ಹಿಂದೆ ಝುಂಜರವಾಡ ಗ್ರಾಮದ ರೂಪಾ ಸದಾಶಿವ ಕಾಂಬಳೆ (21) ಯುವತಿ ಅನಾರೋಗ್ಯದಿಂದ ಮರಣ ಹೊಂದಿದ್ದಳು. ಆದರೆ ತುಂಬಾ ಪ್ರೀತಿ ಮಾಡುತ್ತಿದ್ದ ಗಂಡ ಸದಾಶಿವ ರಾಮಪ್ಪ ಕಾಂಬಳೆ (26) ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ಎರಡು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದ ಈ ಜೋಡಿಗಳ ಬಾಳಲ್ಲಿ ಬಿರುಗಾಳಿ ಎದ್ದಿದೆ. ಹೆಂಡತೊ ಅಕಾಲಿಕ ಮರಣದಿಂದ ಮನನೊಂದ ಯುವಕ ಸದಾಶಿವ ಕಾಂಬಳೆ. ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇನ್ನೂ ಯುವಕನನ್ನು ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!