ಪಂಪಸೆಟ್ ಪೈಪ್ ಕಳವು ; ಆರೋಪಿ ಬಂಧನಕ್ಕೆ ರೈತರ ಆಗ್ರಹ
ಅಥಣಿ : ತಾಲೂಕಿನ ಚಿಕ್ಕೂಡ ಗ್ರಾದ ರೈತ ಇವರ ನೀರು ಸರಬರಾಜು ಮಾಡುವ ಮೋಟಾರ್ ಪೈಪ್ ಕಳ್ಳತನವಾಗಿದೆ.
ಕೃಷ್ಣಾ ನದಿ ತೀರದದಲ್ಲಿ ಅಳವಡಿಸಲಾದ ಕೃಷಿ ಜಮೀನುಗಳಿಗೆ ನೀರು ಹಾಯಿಸುವ ಪಂಪಸೆಟ್ ಗೆ ಅಳವಡಿಸಲಾಗಿದ್ದ ಪೈಪ್ ಕಳ್ಳತನವಾಗಿವೆ. ಇದರಿಂದ ಲಕ್ಷಾಂತರ ಮೌಲ್ಯದ ಬೆಳೆಗೆ ನೀರು ಹಾಯಿಸಲು ರೈತರು ಪರದಾಡುವ ಘಟನೆ ನಡೆದಿದೆ.
ಈ ಪ್ರಕರಣ ಅನೇಕ ದಿನಗಳ ಹಿಂದೆ ನಡೆದಿದ್ದರು ಮತ್ತೆ ಪೈಪ್ ಕಳ್ಳತನ ಪ್ರಕರಣ ನಡೆಯುತ್ತಿದ್ದು ರೈತರಿಗೆ ತಲೆನೋವು ತರಿಸಿದೆ. ಈ ಕುರಿತು ಪೋಲಿಸರು ಕ್ರಮ ಜರುಗಿಸಬೇಕೆಂದು ರೈತರ ಆಗ್ರಹವಾಗಿದೆ.


