ಸಭೆ ಮಧ್ಯದಲ್ಲೇ ಕುಸಿದು ಬಿಜೆಪಿ ಮುಖಂಡ ಸಾವು
ಬೆಂಗಳೂರು : ಚಿತ್ರದುರ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ವಿಭಾಗದ ಪ್ರಭಾರಿಯಾಗಿದ್ದ ಸಿದ್ದೇಶ್ ಯಾದವ್ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮುಖಂಡರ ಸಭೆ ನಡೆದಿದತ್ತು. ಈ ಸಭೆಯಲ್ಲಿ ಸಿದ್ದೇಶ್ ಯಾದವ್ ಕೂಡಾ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕಾಣಿಸಿಕೊಂಡರ ತೀವ್ರ ಎದೆನೋವಿನಿಂದ ಕುಸಿದುಬಿದ್ದು ಮೃಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದೇಶ್ ಅವರನ್ನು ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದುರು ಚಿಕಿತ್ಸೆ ಫಲಕಸರಿಯಾಗದೆ ಮೃತಪಟ್ಟಿದ್ದಾರೆ. ಇವರ ಸಾವಿಗೆ ಬಿಜೆಪಿ ಗಣ್ಯರು ಹಾಗೂ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.


