Select Page

Advertisement


ಸಮಾಜಸೇವೆ ಕನಸುಹೊತ್ತ ಬೆಳಗಾವಿ ಮಹಿಳಾ ನಾಯಕಿಯರಿಗೆ ಸಿಗುವುದೇ ಎಂ.ಪಿ ಅವಕಾಶ

<br />ಸಮಾಜಸೇವೆ ಕನಸುಹೊತ್ತ ಬೆಳಗಾವಿ ಮಹಿಳಾ ನಾಯಕಿಯರಿಗೆ ಸಿಗುವುದೇ ಎಂ.ಪಿ ಅವಕಾಶ
Advertisement

ಬೆಳಗಾವಿ : ಬಿಜೆಪಿ ಯಾವತ್ತೂ ಸಂಘಟನೆ ಶಕ್ತಿಯನ್ನೇ ನಂಬಿ ಬೆಳೆದಿರುವ ಪಕ್ಷ. ಇಲ್ಲಿ‌ ಮುಖಂಡರಿಗಿಂತ ಕಾರ್ಯಕರ್ತರಿಗೆ ಹೆಚ್ಚಿನ‌ ಪ್ರಾಶಸ್ತ್ಯ. ಇಂತಹ ಸಂದರ್ಭಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿವೆ. ಈ ಎಲ್ಲಾ ಕಾರಣಗಳಿಂದ ಸಧ್ಯ ಟಿಕೆಟ್ ಕಸರತ್ತು ಜೋರಾಗಿದೆ.

ಕಳೆದ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ಕೊಡಬೇಕು ಎಂಬ ಮಾತು ಇದ್ದು, ಮೋದಿ ಸರ್ಕಾರ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪುರುಷರಿಗೆ ‌ಸಮನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಅನೇಕ ಮಹಿಳಾ ನಾಯಕಿಯರು ಇದ್ದು ಪಕ್ಷ ಅವರನ್ನು ಗುರುತಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಕಾರ್ಯಕರ್ತರು‌.

ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ‌ ಸಧ್ಯ ಮಹಿಳಾ ಲೋಕಸಭಾ ಸದಸ್ಯೆಯಾಗಿ ಮಂಗಲಾ ಅಂಗಡಿ ಇದ್ದು, ಈ ಬಾರಿ  ಅವರಿಗೆ ಟಿಕೆಟ್ ನಿರಾಕರಣೆ ಆಗುವ ಸಾಧ್ಯತೆ. ಮೊದಲಬಾರಿಗೆ ಬೆಳಗಾವಿ ಲೋಕಸಭೆಗೆ ಮಹಿಳಾ‌ ಸಂಸದರಾಗಿದ್ದ ಮಂಗಳ ಅಂಗಡಿ ಅವರಿಗೆ ಮತ್ತೊಂದು ಬಾರಿ ಅವಕಾಶ ಸಿಗುವುದು ವಿರಳ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದ ಡಾ. ಸೋನಾಲಿ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಆದರೆ ಪಕ್ಷದ ಹೈಕಮಾಂಡ್ ಈ ಬಾರಿ ಲೋಕಸಭಾ ಟಿಕೆಟ್ ನೀಡುವ ಮೂಲಕ ಮಹಿಳೆಯರಿಗೆ ಸ್ಥಾನ ನೀಡಿದರೆ ಉತ್ತಮ ಎನ್ನುತ್ತಿದ್ದಾರೆ ಕಾರ್ಯಕರ್ತರು.

ಇಷ್ಟೆ ಅಲ್ಲದೆ. ಮಾಜಿ ನಿಗಮಮಂಡಳಿ ಸದಸ್ಯೆ ದೀಪಾ ಕುಡಚಿ, ಬಿಜೆಪಿ ಮುಖಂಡರಾದ ಉಜ್ವಲ ಬಡವನಾಚೆ, ಸವದತ್ತಿಯ ಶಿಲ್ಪಾ ಗೋದಿಗೌಡರ್, ಜೋತಿ‌ ಕೊಲ್ಹಾರ್, ರೇಖಾ ಚಿನ್ನಾಕಟ್ಟಿ ಸೇರಿದಂತೆ ಅನೇಕ ಮಹಿಳಾ ಮುಖಂಡರು ಈ ಬಾರಿಯ ಲೋಕಸಭಾ ಟಿಕೆಯ ನಿರೀಕ್ಷೆಯಲ್ಲಿ ಇದ್ದಾರೆ.  ಈಗಾಗಲೇ ಮಹಿಳಾ ಮೀಸಲಾತಿ ಕುರಿತು ಮಹತ್ವದ ನಿರ್ಧಾರ ತಗೆದುಕೊಂಡ ಬಿಜೆಪಿ ಹೈಕಮಾಂಡ್ ಮಹಿಳಾ ಶಕ್ತಿಗೆ ಅವಕಾಶ ನೀಡುತ್ತಾರೆ ಎಂಬ ಮಾತಿದೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಈ ಬಾರಿ ಬೆಳಗಾವಿ ಲೋಕಸಭಾ ‌ಕ್ಷೇತ್ರಕ್ಕೆ ಮತ್ತೊಮ್ಮೆ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆಯಾ ಎಂದು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!