ವೀರಶೈವ ಧರ್ಮದ ಕಹಳೆ ಮೊಳಗಿಸುವಲ್ಲಿ ಹಾನಗಲ್ ಕುಮಾರಸ್ವಾಮಿಜಿ ಪಾತ್ರ ಅನನ್ಯ ; ಸಿದ್ದರಾಮ ಸ್ವಾಮೀಜಿ
ಬೈಲಹೊಂಗಲ : 12 ನೇ ಶತಮಾನದಲ್ಲಿ ಮಾನವ ಉದ್ದಾರಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯಗಳನ್ನು ಸಮಾಜದಲ್ಲಿ ಬಿತ್ತರಿಸಲು 20 ನೇ ಶತಮಾನದಲ್ಲಿ ಅವಿರತವಾಗಿ ವೀರಶೈವ ಧರ್ಮದ ಕಹಳೆ ಉದುತ್ತಾ ಜನ ಜಾಗೃತಿಗೈದ ಲಿಂ. ಹಾನಗಲ್ ಕುಮಾರ ಶಿವಯೋಗಿಗಳ ಪಾತ್ರ ಅನನ್ಯವಾಗಿದೆ ಎಂದು ಗದಗ-ಡಂಬಳದ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ನುಡಿದರು.
ಅವರು ಪಟ್ಟಣದ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಲಿಂ.ಹಾನಗಲ್ ಕುಮಾರ ಸ್ವಾಮೀಜಿಯವರ 158 ನೇ ಜಯಂತಿ ಮಹೋತ್ಸವ ಹಾಗೂ ಬೆಳಗಾವಿ ರುದ್ರಾಕ್ಷಿಮಠದ ಕಾಯಕಯೋಗಿ ಲಿಂ.ಡಾ.ಶಿವಬಸವ ಸ್ವಾಮೀಜಿ ಅವರ 31 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಜೀವನ ದರ್ಶಣ ಪ್ರವಚನ ಮುಕ್ತಾಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶಿವಯೋಗ ಮಂದಿರದ ಹರಿಕಾರರಾದ ಲಿಂ. ಹಾನಗಲ್ ಕುಮಾರ ಶ್ರೀಗಳ ಸಾಧನೆಗಳನ್ನು ಪ್ರಸ್ತುತ ಸಮಾಜಕ್ಕೆ ಬಿತ್ತರಿಸುವ ಪ್ರಯತ್ನದಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ಕುಟುಂಬದ ಸೇವೆ-ಶ್ರಮ ಅಗಾಧವಾಗಿದೆ ಎಂದರು.
ಶೇಗುಣಿಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿ ಪ್ರವಚನದಲ್ಲಿ ಮಾತನಾಡಿ, ಪ್ರತಿಯೊಬ್ಬರ ಬದುಕು ಹಸನಾಗಲು ಜ್ಞಾನದ ಬೆಳಕು ನೀಡಿ ಉನ್ನತೀಕರಿಸಿದ ಯೋಗಿಗಳನ್ನು ಎಂದೂ ಮರೆಯಬಾರದು. ಬದುಕಿನ ಯಶಸ್ಸಿಗೆ ಅಧ್ಯಾತ್ಮದ ಅಂಶ ಅತೀ ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಯುವ ಜನಾಂಗ ವಚನ ಸಾಹಿತ್ಯ, ಶರಣ ಪರಂಪರೆಯನ್ನು ಅಲ್ಲಗಳೆಯಬಾರದೆಂದರು.
ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ದೊಡವಾಡದ ಜಡಿಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಗಾಳೇಶ್ವರ ಮಠದ ಚಿದಾನಂದ ಶ್ರೀಗಳು, ಹಂದಿಗುಂದ ಗಿರಿಮಠದ ಆಡಿಯ ಶಿವಾನಂದ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರ ಶ್ರೀಗಳು, ಶೇಗುಣಿಸಿಯ ಡಾ.ಮಹಾಂತಪ್ರಭು ಶ್ರೀಗಳು, ಜಗೇರಿಯ ಗುರುಸಿದ್ದೇಶ್ವರ ಶ್ರೀಗಳು ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಶ್ರೀಗಳು,
ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಶ್ರೀಗಳು, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ಧೇಶಕ ಡಾ. ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ಹಿಡಕಲ್ದ ಪ್ರಭು ಅಡವಿಸಿದ್ದೇಶ್ವರ ಶ್ರೀಗಳು, ವೇ.ಮೂ.ವಿಶ್ವನಾಥ ಹಿರೇಮಠ ಮುಂತಾದವರು ವೇದಿಕೆ ಮೇಲಿದ್ದರು.
ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಸುಶೀಲಮ್ಮ ಕೌಜಲಗಿ, ಕೆಎಲ್ಇ ಉಪಾಧ್ಯಕ್ಷ ಬಸವರಾಜ ತಟವಾಟಿ, ನ್ಯಾಯವಾದಿ ಬಿ.ಎಸ್.ಕಿವಡಸಣ್ಣವರ, ವಿಲಾಸ ವಾಲಿ, ಗಂಗಾಧರ ಚಚಡಿ, ಬಾಬಣ್ಣ ಪೋತದಾರ, ವಕೀಲ ಸಿದ್ದಣ್ಣ ಗದಗ, ಶ್ರೀಶೈಲ ಖೋದಾನಪೂರ, ಯುವ ಮುಖಂಡ ಬಸವರಾಜ ಕೌಜಲಗಿ,
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ತಾಲೂಕಾ ಅನುಷ್ಠಾನಗಳ ಸಮೀತಿ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಡಾ.ಎ.ಎನ್.ಬಾಳಿ, ಮಡಿವಾಳಪ್ಪ ಭಟ್ಟಿ, ವೀರುಪಾಕ್ಷ ಕೌಜಲಗಿ, ಶಂಕರಣ್ಣ ಬಾಳಿ, ಮಹಾಂತೇಶ ಅಕ್ಕಿ, ಪ್ರೇಮಾ ಅಂಗಡಿ, ಗಿರೀಜಾ ಕೌಜಲಗಿ, ಸುರೇಖಾ ಕೌಜಲಗಿ, ಉಷಾ ಬೆಲ್ಲದ, ಶಿವಲಿಂಗ ಪರಂಡಿ, ಶ್ರೀಧರ ಶೆಟ್ಟರ, ಈರಣ್ಣ ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಮಠಾಧೀಶರನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಮಾರು ಮೂರು ದಿನಗಳ ಕಾಲ ಶೇಗುಣಿಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಶ್ರೀಗಳಿಂದ ಜೀವನ ದರ್ಶನ ಪ್ರವಚನ ಜರುಗಿತು. ಮಹೇಶ ಬೆಲ್ಲದ ಸ್ವಾಗತಿಸಿದರು. ಶರಣೆ ಶೋಭಾ ಛಬ್ಬಿ ನಿರೂಪಿಸಿದರು. ಶಿವಕುಮಾರ ಹಂಪಣ್ಣವರ ವಂದಿಸಿದರು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.


