
VIDEO : ಅಥಣಿಯಲ್ಲಿ ಮತ್ತೊಂದು ಭೀಕರ ಕಾರು ಅಪಘಾತ ವ್ಯಕ್ತಿ ಸಾವು

ಅಥಣಿ : ಶಾಲಾ ಬಸ್ ಅಪಘಾತವಾಗಿ ಇಬ್ಬರು ಚಾಲಕರು ಮೃತಪಟ್ಟ ಘಟನೆ ಬೆನ್ನಲ್ಲೇ ಅಥಣಿ ತಾಕೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಪಕ್ಕದ ಆಲದ ಮರ ಹತ್ತಿರ ಭಾನುವಾರ ಬೆಳಿಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದೆ.

ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದ ಸುರೇಂದ್ರ ಮಲ್ಲಣ್ಣವರ (60) ವ್ಯಕ್ತಿ ಅಥಣಿ ತಾಲೂಕಿನ ಐನಾಪುರ ಗ್ರಾಮಕ್ಕೆ ಕಾಮಾಲೆ ಔಷಧ ತಗೆದುಕೊಂಡು ಬರುವಾಗ ಕೃಷ್ಣಾ ಶುಗರ್ ಪಕ್ಕ ಈ ಅವಘಡ ಸಂಭವಿಸಿದೆ.

ರಸ್ತೆ ಬಿಟ್ಟು ಸುಮಾರು ಇನ್ನೂರು ಅಡಿ ಗೋವಿನ ಜೋಳದ ತೋಟದಲ್ಲಿ ಕಾರು ಪಲ್ಟಿಯಾಗಿ ಬಿದ್ದಿದೆ. ಏರ್ ಬ್ಯಾಗ್ ಬಿಚ್ಚಿದ್ದರು ಚಾಲಕ ಸಾವಣಪ್ಪಿದ್ದು ದುರದೃಷ್ಟಕರ.