ಅಥಣಿ : ಶಾಲಾ ಕೊಠಡಿಯಲ್ಲೇ ಪುಟಾಣಿ ಮಗುವಿಗೆ ಕಚ್ಚಿದ ಹಾವು
ಅಥಣಿ : ತಾಲೂಕಿನ ಕೊಕಟನೂರ ಗ್ರಾಮದ ಖಾಸಗಿ ಶಾಲೆಯೊಂದರ 2ನೇ ತರಗತಿ ವಿದ್ಯಾರ್ಥಿನಿಗೆ ಹಾವು ಕಚ್ಚಿದ ಪರಿಣಾಮ ಅಸ್ವಸ್ಥಗೊಂಡ ಘಟನೆ ಗುರುವಾರ ನಡೆದಿದೆ.
ಗೌತಮಿ ಉಮೇಶ ಬಿದರಿ (8) ಅಸ್ವಸ್ಥಗೊಂಡ ವಿದ್ಯಾರ್ಥಿನಿ. ಶಾಲೆ ಕೊಠಡಿಯೊಳಗೆ ಹೋಗಿ ಬ್ಯಾಗ್ ಇಡುವಾಗ ಹಾವು ಕಚ್ಚಿದೆ.
ಕೂಡಲೇ ವಿದ್ಯಾರ್ಥಿನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹಾರೂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


