ಅಥಣಿ : ಭೀಕರ ರಸ್ತೆ ಅಪಘಾತ ; ಸವಾರನ ಸ್ಥಿತಿ ಚಿಂತಾಜನಕ
ಅಥಣಿ : ತಾಲೂಕಿನ ಕರ್ಲಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ.
ರಸ್ತೆ ಬದಿ ಬೈಕ್ ಜೊತೆ ನಿಂತಿದ್ದ ಮುರಗುಂಡಿ ಗ್ರಾಮದ ಮಹಾಬಲ ಎಂಬುವವರಿಗೆ ದ್ವಿಚಕ್ರ ವಾಹನ ಸವಾರರು ಗುದ್ದಿದ್ದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಅಪಘಾತ ಮಾಡಿದವರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಗಾಯಗಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


