ಅಥಣಿ : ಖ್ಯಾತ ಯೋಗ ಗುರು ಹಾಗೂ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿಯವರಿಗೆ ಪಿತ್ರ ವಿಯೋಗವಾಗಿದೆ.

ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ದುಂಡಪ್ಪ ಅದೃಶ್ಯಪ್ಪ ಗೌರಗೊಂಡ ಲಿಂಗೈಕ್ಯರಾಗಿದ್ದಾರೆ. ಇವರ ಅಂತ್ಯಸಂಸ್ಕಾರ ಸೋಮವಾರ ಸಂಜೆ  5 ಗಂಟೆಗೆ ಸ್ವ ಗ್ರಾಮ ತಾಂವಶಿಯಲ್ಲಿ ನೆರವೇರಲಿದೆ.