ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿ ನಾಲ್ವರಿಗೆ ಸಾರ್ವಜನಿಕ ವಾಚನಾಲಯ ಪ್ರಶಸ್ತಿ ಪ್ರದಾನ
ಬೆಳಗಾವಿ : ಹಿರಿಯ ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿದಂತೆ ನಾಲ್ವರಿಗೆ ಸಾರ್ವಜನಿಕ ವಾಚನಾಲಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾನುವಾರ ನಗರದ ಮರಾಠಾ ಮಂದಿರದಲ್ಲಿ ನಡೆದ ಬ್ಯಾರಿಸ್ಟರ್ ನಾಥ ಪೈ ಉಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಂಜುನಾಥ ಪಾಟೀಲ್ ಸೇರಿ ನಾಲ್ವರಿಗೆ ಸಾರ್ವಜನಿಕ ವಾಚನಾಲಯದ ವತಿಯಿಂದ ನೀಡಲಾಗುವ ಸಾರ್ವಜನಿಕ ವಾಚನಾಲಯ ಬೆಳಗಾವಿ ಪತ್ರಕರ್ತ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ಜೊತೆಗೆ ಪತ್ರಕರ್ತರಾದ ಸುಶಾಂತ್ ಕುರಂಗಿ, ಅಕ್ಷತಾ ನಾಯಕ್ ಹಾಗೂ ವಿಮಲಾ ಸಿ. ಚಿನಕೇಕರ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.


