Select Page

Advertisement

ಗಣೇಶ ಮಂಡಳಿಗೆ ಯತ್ನಾಳ ಬಂಪರ್ ಕೊಡುಗೆ ; ದೇಣಿಗೆ ಹಣ ಎಷ್ಟು ಕೊಡ್ತಾರೆ ಗೊತ್ತಾ…?

ಗಣೇಶ ಮಂಡಳಿಗೆ ಯತ್ನಾಳ ಬಂಪರ್ ಕೊಡುಗೆ ; ದೇಣಿಗೆ ಹಣ ಎಷ್ಟು ಕೊಡ್ತಾರೆ ಗೊತ್ತಾ…?

ವಿಜಯಪುರ : ಸದಾ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಜಯಪುರ ಬಿಜೆಪಿ ಶಾಸಕ ಹಾಗೂ ಮಾಜಿ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ ವಿಭಿನ್ನ ಕೆಲಸದಿಂದ ಗಮನಸೆಳೆದಿದ್ದಾರೆ.

ಯಾವಾಗಲೂ ಹಿಂದೂ ಧರ್ಮದ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಯತ್ನಾಳ್ ಈ ಬಾರಿ ವಿಜಯಪುರ ನಗರದ ಗಣೇಶ ಮಂಡಲಕ್ಕೆ ವೈಯಕ್ತಿಕವಾಗಿ ದೇಣಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ವಿಜಯಪುರದ ಪ್ರತಿ ಗಜಾನನ_ಮಂಡಳಿಗಳಿಗೆ ಸ್ವಾತಂತ್ರ ವೀರ ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ.

ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ ಸ್ವಾಮಿ ವಿವೇಕಾನಂದಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು ಎಂದು ಯತ್ನಾಳ್ ಟ್ವಿಟ್ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!