
ರಾಯಬಾಗ : ಫೈನಾನ್ಸ್ ಕಿರುಕುಳ, ಆತ್ಮಹತ್ಯೆಗೆ ಶರಣಾದ ರೈತ

ರಾಯಬಾಗ : ಮೈಕ್ರೋ ಫೈನಾನ್ಸ್ ಸಾಲದ ಕಿರುಕುಳಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ರೈತ
ಶಿವನಪ್ಪ ರಾವಜಪ್ಪ ಧರ್ಮಟ್ಟಿ (66) ಮೃತ ದುರ್ದೈವಿ.
ಚಿಕ್ಕೋಡಿ ಐ ಡಿ ಎಫ್ ಸಿ ಬ್ಯಾಂಕ್ ನ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ರೈತನ ಆತ್ಮಹತ್ಯೆ ಕಾರಣ ಪೊಲೀಸ್ ತನಿಖೆಯಿಂದ ದೃಢವಾಗಬೇಕಿದೆ.