Select Page

ಅವರ ದೋಷದಿಂದ ಅಥಣಿಯಲ್ಲಿ ಹಿನ್ನಡೆ : ಸತೀಶ್ ಆರೋಪಕ್ಕೆ ಮೌನ ಮುರಿದ ಲಕ್ಷ್ಮಣ ಸವದಿ – Video

ಅವರ ದೋಷದಿಂದ ಅಥಣಿಯಲ್ಲಿ ಹಿನ್ನಡೆ : ಸತೀಶ್ ಆರೋಪಕ್ಕೆ ಮೌನ ಮುರಿದ ಲಕ್ಷ್ಮಣ ಸವದಿ – Video

ಅಥಣಿ : ನನ್ನ ಮೇಲೆ ಆರೋಪ ಮಾಡುವವರು ಮೊದಲು ಈ ಕ್ಷೇತ್ರದ ಪಾರಂಪರಿಕ ಮತಗಳ ಕುರಿತು ಅರಿಯಲಿ. ಚುನಾವಣೆಯಲ್ಲಿ ಅವರು ಎಡವಿದ್ದಕ್ಕೆ ಹಿನ್ನಡೆ ಉಂಟಾಗಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಡೆಸುವುದಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಲೀಡ್ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ. 2018 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ, ಆದರೆ 2019 ರ ಉಪ ಚುನಾವಣೆಯಲ್ಲಿ ಬಿಜೆಪಿ ಲೀಡ್ ಪಡೆಯಿತು. ಆಯಾ ಸಮಯದಲ್ಲಿ ಬದಲಾವಣೆ ಆಗುತ್ತವೆ ಎಂದರು.

ಆಯಾ ಕ್ಷೇತ್ರದಲ್ಲಿ ಪಾರಂಪರಿಕ ಮತಗಳು ಇರುತ್ತವೆ. ಪಕ್ಷ ಹಾಗೂ ವ್ಯಕ್ತಿಯ ಆಧಾರದ ಮೇಲೆ ಕೆಲವು ಸಲ ಮತದಾನ ಆಗುತ್ತದೆ. ಈ ಹಿನ್ನಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ನಂತರ ಈಗ ಏಳು ಸಾವಿರ ಮತ ಮೈನಸ್ ಆಗಲು ಕಾರಣ ಆಗಿದೆ ಎಂದರು.

ಅವರು ಚುನಾವಣೆಯಲ್ಲಿ ಎಡವಿದ್ದಾರೆ. ಆ ಹಿನ್ನಲೆಯಲ್ಲಿ ಅಥಣಿಯಲ್ಲಿ ಕಾಂಗ್ರೆಸ್ ಮೈನಸ್ ಆಗಿದೆ. ಕಡಿಮೆ ಮತದಾನಕ್ಕೆ ಕೆಲ ದೋಷಗಳು ಕಾರಣವಾಗಿವೆ. ಇದನ್ನು ಬಹಿರಂಗವಾಗಿ ಚರ್ಚೆ ಮಾಡದೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ ಎಂದು ಲಕ್ಷ್ಮಣ ಸವದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸವದಿ ವಿರುದ್ಧ ಸಚಿವ ಸತೀಶ್ ಗರಂ

ಅಥಣಿ ಕ್ಷೇತ್ರದಲ್ಲಿ ನಮ್ಮ ನಂಬಿಕೆಗೆ ಮೋಸವಾಗಿದೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಮೂಲ‌ ಕಾಂಗ್ರೆಸ್ ಮತದಾರರು ಕೈ ಹಿಡಿದ ಪರಿಣಾಮ ನಮ್ಮ ಜಯವಾಗಿದೆ ಎಂದು ಬಹಿರಂಗವಾಗಿಯೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ಅಥಣಿ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿತ್ತು. ಆದರೆ ಕೆಲ ಕ್ಷೇತ್ರಗಳಲ್ಲಿ ನಮ್ಮವರಿಂದಲೇ ಮೋಸವಾಗಿದೆ. ಕ್ಷೇತ್ರದ ಅನೇಕ ಕಡೆ ಗೆಲುವಿನ ಗುಲಾಲ್ ಹಾರಿದ್ದರು ಅಥಣಿಯಲ್ಲಿ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ನಮ್ಮ ನಂಬಿಕೆಗೆ ಅಥಣಿಯಲ್ಲಿ ಮೋಸವಾಗಿದೆ. ಚುನಾವಣೆ ಪೂರ್ವದಲ್ಲಿ ಇಲ್ಲಿನ ನಾಯಕರು ಪಕ್ಷದ ಕಾರ್ಯಕ್ರಮಗಳಿಗೆ ಭಾಗವಹಿಸಲಿಲ್ಲ. ಪ್ರಚಾರ ಕಾರ್ಯದಲ್ಲಿ ಉತ್ಸಾಹ ತೋರಿಸಲಿಲ್ಲ. ಕೊನೆ ಪಕ್ಷ ನಮಗೆ ತಿಳಿಸಿದ್ದರೆ ನಾವಾದರು ಕೆಲಸ ಮಾಡಿ ಹೆಚ್ಚಿನ ಮತ ಪಡೆಯಲು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವು. ಇದರಿಂದ ನಮ್ಮ ಮತ್ತು ಅವರ ಮಧ್ಯೆ ಅಂತರ ಹೆಚ್ಚಾಗಿದೆ ಎಂದು ಸವದಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು.

ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಮತದಾನ ಪೂರ್ವದಲ್ಲಿ ಕ್ಷೇತ್ರದ ಸ್ಥಿತಿಗತಿ ಕುರಿತು ತಿಳಿಸಿದ್ದರು. ಸ್ವಲ್ಪ ಕಷ್ಟ ಎದುರಾಗುತ್ತಿದ್ದಂತೆ ನಮಗೂ ಕ್ಷೇತ್ರವನ್ನು ನೋಡಿಕೊಳ್ಳಲು ತಿಳಿಸಿದ್ದರ ಪರಿಣಾಮ ನಾವು ಚುನಾವಣೆಯಲ್ಲಿ ಹೆಚ್ಚಿನ ಕಾರ್ಯ ಮಾಡಲು ಸಹಕಾರಿಯಾಯಿತು.

ಇದರಿಂದ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿದೆ. ಆದರೆ ಅಥಣಿಯಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಮುಂದಿನ ದಿನಮಾನದಲ್ಲಿ ಮೂಲ ಕಾಂಗ್ರೆಸ್ಸಿಗರ ಕೈ ಬಲಪಡಿಸುವ ಭರವಸೆಯನ್ನು ಸಚಿವ ಸತೀಶ್ ಜಾರಕಿಹೊಳಿ ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!