Select Page

ಚನ್ನಪಟ್ಟಣಕ್ಕೆ ಕೇಳಿಬಂದ ಅಚ್ಚರಿ ಹೆಸರುಗಳು….!

ಚನ್ನಪಟ್ಟಣಕ್ಕೆ ಕೇಳಿಬಂದ ಅಚ್ಚರಿ ಹೆಸರುಗಳು….!

ಬೆಂಗಳೂರು : ಚನ್ನಪಟ್ಟಣ ಉಪ ಚುನಾವಣೆ ಕಾವು ಹೆಚ್ಚಾಗಿದ್ದು ಸಧ್ಯ ಜೆಡಿಎಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಹೆಚ್ಚಾಗಿದೆ, ಈ ಮಧ್ಯೆ ಮೂರು ಅಚ್ಚರಿ ಹೆಸರುಗಳು ಕೇಳಿಬರುತ್ತಿದ್ದು ಜೆಡಿಎಸ್ ಯಾರಿಗೆ ಅವಕಾಶ ಕಲ್ಪಿಸುತ್ತದೆ ಎಂಬುದು ಜನ ಕಾಯುತ್ತಿದ್ದಾರೆ.

ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿ.ಪಿ ಯೋಗೇಶ್ವರ್ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಇವರಿಗೆ ಪೈಪೋಟಿ ನೀಡಬೇಕಾದರೆ ಪ್ರಬಲ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕೆ ಇಳಿಸಬೇಕಾದ ಅನಿವಾರ್ಯತೆ ಮೈತ್ರಿ ಪಕ್ಷಗಳದ್ದು. ಈ ಕಾರಣಕ್ಕೆ ಮೂವರ ಹೆಸರು ಜೋರಾಗಿ ಕೇಳಿಬರುತ್ತಿವೆ.

ಮೊದಲನೆಯದಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ ಪತ್ನಿ ಅನಸೂಯ ಅವರಿಗೆ ಟಿಕೆಟ್ ನೀಡಬೇಕೆಂದು ಕೆಲವರ ವಾದವಾಗಿದೆ. ಜೊತೆಗೆ ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರನ್ನು ಪಕ್ಷದ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರು ಸಧ್ಯ ಚನ್ನಪಟ್ಟಣ ಹೆಸರು ಜೋರಾಗಿ ಕೇಳಿಬರುತ್ತಿದೆ.

ಸಧ್ಯ ಯೋಗೇಶ್ವರ್ ನೇರ ಎದುರಾಳಿ ಕುಮಾರಸ್ವಾಮಿ ಆಗಿದ್ದು, ಈ ಬಾರಿ ಚನ್ನಪಟ್ಟಣ ಗೆಲ್ಲಲು ರಣತಂತ್ರ ಹೆಣೆದಿದ್ದಾರೆ. ಇತ್ತ ಇವರಿಗೆ ಸೋಲಿಣ ರುಚಿ ತೋರಿಸಲು ಜೆಡಿಎಸ್ ಪ್ಲ್ಯಾನ್ ನಡೆಸಿದ್ದು ಅಭ್ಯರ್ಥಿ ಆಯ್ಕೆ ಕಗಂಟಾಗಿದ್ದು ಸುಳ್ಳಲ್ಲ.

Advertisement

Leave a reply

Your email address will not be published. Required fields are marked *

error: Content is protected !!