ಬೆಳಗಾವಿ : ಭೀಕರ ರಸ್ತೆ ಅಪಘಾತ ; ಏರ್ ಬ್ಯಾಗ್ ನಿಂದ ಉಳಿದ ಜೀವ
ಬೆಳಗಾವಿ : ಇಲ್ಲಿನ ಕ್ಲಬ್ ರಸ್ತೆಯಿಂದ ಹಿಂಡಲಗಾ ಗಣೇಶ ಮಂದಿರ ಮಾರ್ಗದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ನಿಂತ ಲಾರಿಗೆ ಕಾರ್ ಅಪ್ಪಳಿಸಿದ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜಾದ ಘಟನೆ ಬುಧವಾರ ನಡೆದಿದೆ.
ಹಿಂಡಲಗಾದಿಂದ ವೇಗವಾಗಿ ಬರುತ್ತಿದ್ದ ಕಾರ್ ಗಾಂಧಿ ಪ್ರತಿಮೆ ಬಳಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ನಿಂತ ಲಾರಿಗೆ ಅಪ್ಪಳಿಸಿದೆ. ಕಾರ್ ಗುದ್ದಿದ್ದ ರಭಸಕ್ಕೆ ಕಾರು ನುಜ್ಜಾಗಿದೆ, ಕಾರ್ ಚಾಲಕನಿಗೆ ಸಣ್ಣಪುಟ್ಟಗಾಯವಾಗಿದೆ. ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


