ಕೆಲಸದಿಂದ ವಜಾ ; ಮನನೊಂದು ಬೆಳಗಾವಿ ಯುವಕ ಆತ್ಮಹತ್ಯೆ
ಬೆಳಗಾವಿ : ಖಾಸಗಿ ಕಂಪನಿಯೊಂದು ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದಲ್ಲಿ ನಡೆದಿದೆ.
ಎಂಸಿಎ ಪದವೀಧರನಾಗಿದ್ದ ರವಿ ಹಟ್ಟಿಕಹೊಳಿ (24) ಆತ್ಮಹತ್ಯೆಗೆ ಶರಣಾದ ಯುವಕ. ಮಹಾರಾಷ್ಟ್ರದ ಪುಣೆ ಮೂಲದ ಖಾಸಗಿ ಕಂಒನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ರವಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ಯುವಕನನ್ನು ಸಂಸ್ಥೆ ಕೆಲಸದಿಂದ ವಜಾಗೊಳಿಸಿತ್ತು.
ತನ್ನ ಸ್ವಗ್ರಾಮ ಮೋದಗಾಗೆ ಬಂದಿದ್ದ ರವಿ ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


