Select Page

Advertisement

ಭೀಕರ ರಸ್ತೆ ಅಪಘಾತ ; ಬಟ್ಟೆ ಕೊಳ್ಳಲು ಹೋದವರು ದಾರುಣ ಸಾವು

ಭೀಕರ ರಸ್ತೆ ಅಪಘಾತ ; ಬಟ್ಟೆ ಕೊಳ್ಳಲು ಹೋದವರು ದಾರುಣ ಸಾವು

ಬೈಲಹೊಂಗಲ : ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂಚಲ ಗ್ರಾಮದ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
    
ಮೃತಪಟ್ಟವರು ಬೈಲಹೊಂಗಲ ಪಟ್ಟಣದ ಲದ್ದಿಗಟ್ಟಿ ನಿವಾಸಿ ಮಂಗಲಾ ಮಹಾಂತೇಶ ಭರಮನಾಯ್ಕರ (50), ಚಾಲಕ ಸಂಪಗಾಂವ ಗ್ರಾಮದ ಶ್ರೀಶೈಲ ಸಿದ್ದನಗೌಡ ನಾಗನಗೌಡರ(40) ಎಂದು ಗುರುತಿಸಲಾಗಿದೆ.
   
ಗಂಬೀರವಾಗಿ ಗಾಯಗೊಂಡವರನ್ನು ರಾಯನಾಯ್ಕ ಭರಮನಾಯ್ಕರ, ಗಂಗವ್ವ  ರಾಯನಾಯ್ಕ ಭರಮನಾಯ್ಕರ, ಮಂಜುಳಾ ಶ್ರೀಶೈಲ ನಾಗನಗೌಡರ,  ಇಂಚಲ ಗ್ರಾಮದ ಚಾಲಕ ಸುಭಾನಿ ಲಾಲಸಾಬ ವಕ್ಕುಂದ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಬೈಲಹೊಂಗಲದ ಭರಮನಾಯ್ಕರ ಕುಟುಂಬದ ಮನೆಯ ವಾಸ್ತುಶಾಂತಿ ನಿಮಿತ್ತ ಕೊಣ್ಣೂರ ಗ್ರಾಮಕ್ಕೆ ಬಟ್ಟೆ ಖರೀದಿ ತೆರಳಿದ್ದರು. ಮರಳಿ ವಾಪಸ ಬರುವಾಗ ಎದುರಿಗೆ ಬರುತ್ತಿರುವ ಕಾರ ಇಂಚಲದಿಂದ ರಾಜ್ಯ ಹೆದ್ದಾರಿ ತೆರಳುವಾಗ ಇಂಚಲ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ.

ಪ್ರಕರಣ ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
  ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ  ಎಸ್‌ಪಿ ವೇಣುಗೋಪಾಲ ಎಂ.,  ಡಿವೈಎಸ್‌ಪಿ ರವಿ ನಾಯ್ಕ, ಮುರಗೋಡ ಪಿಐ ಈರಯ್ಯ ಮಠಪತಿ ಭೇಟಿ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!