Select Page

Advertisement

ಯೋಧನ ಶವಸಂಸ್ಕಾರಕ್ಕೆ ಜಾಗ ಕೇಳಿದ ಗ್ರಾಮಸ್ಥರ ಮೇಲೆ ಲಾಠಿ‌ ಬೀಸಿದ ಪೊಲೀಸರು

ಯೋಧನ ಶವಸಂಸ್ಕಾರಕ್ಕೆ ಜಾಗ ಕೇಳಿದ ಗ್ರಾಮಸ್ಥರ ಮೇಲೆ ಲಾಠಿ‌ ಬೀಸಿದ ಪೊಲೀಸರು



ಬೈಲಹೊಂಗಲ : ಯೋಧನ ಅಂತ್ಯಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಬೀಸಿದ ದಾರುಣ ಘಟನೆ ಬೈಲಹೊಂಗಲ ತಾಲೂಕಿನ ‌ಮುರಗೋಡದಲ್ಲಿ ನಡೆದಿದೆ.

ಕಳೆದ ಮೂರು ತಿಂಗಳ‌ ಹಿಂದೆ ಯೋಧ ವಿಷ್ಣು ಕಾರಜೋಳ ( 25 ) ಕರ್ತವ್ಯದಲ್ಲಿ ಇರುವಾಗಲೇ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿ ಆಗದೆ ಯೋಧ ವಿಷ್ಣು ಕಾರಗಜೋಳ ಮೃತಪಟ್ಟಿದ್ದರು. ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲು ಗ್ರಾಮಸ್ಥರು ಸರಕಾರಿ ಜಾಗ ನೀಡುವಂತೆ ಕೇಳಿದ್ದರು.

ಆದರೆ ಪಿಡಿಒ ಸಾರ್ವಜನಿಕರ ಮನವಿ ನಿರಾಕರಿಸಿ ಸರಕಾರಿ ಜಾಗೆ ನೀಡಲು ಸಾಧ್ಯವಿಲ್ಲ. ಬೇಕಿದ್ದರೆ ಸಾರ್ವಜನಿಕ ಸ್ಮಶಾನ ಬಳಸುವಂತೆ ಹೇಳಿದ್ದಕ್ಕೆ ಸಿಟ್ಟಿಗೆದ್ದ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!