
ಬೈಲಹೊಂಗಲ : ದಯಾಮರಣ ಕೋರಿ ರಾಷ್ಟ್ರಪತಿ ಮೊರೆ ಹೋದ ಗುತ್ತಿಗೆದಾರ

ಬೈಲಹೊಂಗಲ : ರಾಜ್ಯದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು, ಮತ್ತು ಗುತ್ತಿಗೆದಾರರಿಂದ ಕಮಿಷನ್ ದಂಧೆ ಮರೆಮಾಚುವ ಮುನ್ನವೆ, ಸಹ ಗುತ್ತಿಗೆದಾರ ಓರ್ವನು ದಯಾಮರಣ ಕೋರಿ ರಾಷ್ಟ್ರಪತಿ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೊರವಿಕೊಪ್ಪ ಗ್ರಾಮದ ಮಣಿಕಂಠ ಕನ್ಸ್ಟ್ರಕ್ಷನ್ ಕಂಪನಿಯ ಮಾಲಿಕರಾದ ಬಸಪ್ಪ ಯಲ್ಲಪ್ಪ ದಳವಾಯಿ ಇವರಿಗೆ ಹುಬ್ಬಳ್ಳಿಯ ಅಶೋಕ ನಗರದಲ್ಲಿ ಉಪ ಕಾರಾಗೃಹದಲ್ಲಿ 4 ಸಂಖ್ಯೆ ಬ್ಯಾರೆಕ್ಸ್ ನಿರ್ಮಾಣ ಕಾಮಗಾರಿಯನ್ನು ಹುಬ್ಬಳ್ಳಿಯ ಕ್ಲಾಸ್-1 ಗುತ್ತಿಗೆದಾರ ಅರವಿಂದ ಜೆ.ಚವ್ಹಾನ ಇಂಜೀನಿಯರ ಮತ್ತು ಕನ್ಟ್ರಕ್ಷನ್ ಕಂಪನಿ ಹೆಸರಿನಲ್ಲಿ ರಾಜ್ಯ ಸರಕಾರದ ಗೃಹ ಇಲಾಖೆ ವ್ಯಾಪ್ತಿ ಒಳಪಡುವ ಅನುದಾನಡಿಯಲ್ಲಿ ಮಂಜೂರಾಗಿತ್ತು.
ಸದರಿ ಗುತ್ತಿಗೆದಾರ ಪ್ರಾರಂಭ ಹಂತದಲ್ಲಿಯೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕೊರವಿಕೊಪ್ಪ ಗ್ರಾಮದ ಮಣಿಕಂಠ ಕನ್ಟ್ರಕ್ಷನ್ ಕಂಪನಿಯ ಮಾಲಿಕ ಬಸಪ್ಪ ಯಲ್ಲಪ್ಪ ದಳವಾಯಿ (35) ಇವರಿಗೆ ಸಹ ಗುತ್ತಿಗೆಯನ್ನು ಅಗ್ರಿಮೆಂಟ್ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿತ್ತು.
ಕಟ್ಟಡದ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಹಂತ-ಹಂತದಲ್ಲಿ ಮುಕ್ತಾಯ ಮಾಡಿಕೊಡುವ ಕುರಿತು ಅನುದಾನ ಬಿಡುಗಡೆಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ ಹೆಚ್ಚಿನ ಕಾಮಗಾರಿಯನ್ನು ಅಧೀಕ್ಷರು ಉಪ ಕಾರಾಗೃಹ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕ.ರಾ.ಪೋ.ವ ಮತ್ತು ಮೂ.ಸೌ.ಅ.ನಿ.ನಿ.ಉಪವಿಭಾಗಾ ನಂ.14 ಹುಬ್ಬಳ್ಳಿ ಇವರ ಆದೇಶದ ಮೇರೆಗೆ ಹೆಚ್ಚಿನ ಕಾಮಗಾರಿ ಮಾಡಿರುವ ಅನುದಾನ ಕೂಡಾ ನೀಡುತ್ತಿಲ್ಲ.
ಸದರಿ ಕಾಮಗಾರಿಯು ಸಂಪೂರ್ಣವಾಗಿ ಮುಗಿಯುವ ಸಂದರ್ಭದಲ್ಲಿ ಅರವಿಂದ ಜೆ.ಚವ್ಹಾನ ಕಂಪನಿಯವರು ಒಪ್ಪಂದದ ಪ್ರಕಾರ ಹಣ ಕೊಡದೆ, ಬೇರೆ ಗುತ್ತಿಗೆದಾರನಿಗೆ ಕಾಮಗಾರಿ ನೀಡಿದರು. ಈ ಕುರಿತು ಪ್ರಶ್ನಿಸಿದರೆ, ವಿನಾಕಾರಣ ನನ್ನ ಮೇಲೆ ಹಲ್ಲೇ ನಡೆಸಿ, ಹಲವಾರು ಭಾರಿ ಜೀವ ಬೆದರಿಕೆ ಹಾಕಿ 84 ಲಕ್ಷ ರೂ.ಹಣ ನೀಡದೆ ವಂಚನೆ ಮಾಡಿ, ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಜೀವಕ್ಕೆ ಯಾವುದೇ ರೀತಿ ಪ್ರಾಣ ಹಾನಿಯಾದರೆ ಗುತ್ತಿಗೆದಾರ ಅರವಿಂದ ಜೆ.ಚವ್ಹಾನ ಹಾಗೂ ಅಧಿಕಾರಿಗಳಿಗೆ ನೇರ ಹೊಣೆಗಾರರೆಂದು ಅಳಲು ತೋಡಿಕೊಂಡಿದ್ದಾರೆ.
ಈ ಕಾಮಗಾರಿಯ ಕುರಿತು ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಗುತ್ತಿಗೆದಾರ ಅರವಿಂದ ಚವ್ಹಾನ ಅವರು ನನಗೆ ಹಣ ನೀಡುವುದಾಗಿ ಒಪ್ಪಿಕೊಂಡು ನಂತರ ಹಣ ನೀಡದೆ ಸತಾಯಿಸಿ, ಜೀವ ಬೆದರಿಕೆ ಒಡ್ಡುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಕೂಡಾ ಗುತ್ತಿಗೆದಾರರಿಂದ ಹಣ ಕೊಡಿಸುವ ಭರವಸೆ ನೀಡಿ, ನಂತರ ದಿನಗಳಲ್ಲಿ ಅವರು ಕೂಡಾ ಕೈ ಚೆಲ್ಲಿ ಕುಳಿತುಕೊಂಡರು. ಆದ್ದರಿಂದ ಮನನೊಂದು ಸಾಕಷ್ಟು ಬಾರಿ ಸಂಬAಧಪಟ್ಟ ಸಚಿವರು, ಅಧಿಕಾರಿಗಳ ಮನೆ ಬಾಗಿಲಿಗೆ ಅಲೆದಾಡಿದರೂ ನನಗೆ ನ್ಯಾಯ ಸಿಗುತ್ತಿಲ್ಲ. ಈಗಾಗಲೇ ನನ್ನ ಆಸ್ತಿಯ ಮೇಲೆ ಲಕ್ಷಾಂತರ ಸಾಲ-ಶೂಲ ಮಾಡಿ, ಬಂಗಾರದ ಒಡುವೆಗಳನ್ನು ಮಾರಿ ಸದರಿ ಕಾಮಗಾರಿಯ ಕಟ್ಟಡ ಸಾಮಗ್ರಿಗಳ ಬಿಲ್ಲ್ ಪಾವತಿ ಮಾಡಿ, ಕೂಲಿ-ಕಾರ್ಮಿಕರ ಸಂಭಳ ನೀಡಿದ್ದೇನೆ.
ಈ ಕುರಿತು ಕಳೆದ 3 ವರ್ಷಗಳಿಂದ ಹಣ ನೀಡುವಂತೆ ಸಾಕಷ್ಟು ಅಲೆದಾಡಿ ಕೊನೆಗೆ ನ್ಯಾಯ ಸಿಗದ ಕಾರಣ ದಯಾ ಮರಣಕ್ಕೆ ರಾಜ್ಯಪಾಲರಿಗೆ, ರಾಷ್ಟ್ರೊತಿ, ಬೆಳಗಾವಿ, ಧಾರವಾಡ-ಹುಬ್ಬಳ್ಳಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅರ್ಜಿ ನೀಡಿದ್ದೇನೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಹ ಗುತ್ತಿಗೆದಾರರನ ಹಣ ಮರಳಿಸಿ ಕೊಟ್ಟು ಜೀವನಕ್ಕೆ ಆಸರೆ ಆಗುತ್ತಾರೇಯೆ ಕಾದು ನೋಡಬೇಕು.