ಅಥಣಿ ರಸ್ತೆ ಅಪಘಾತ ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ
ಅಥಣಿ : ಅಥಣಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಾವಣಪ್ಪಿದ್ದಾರೆ.
ಮೃತಪಟ್ಟವರು ಎಲ್ಲರೂ ಕಲಬುರಗಿಯ ಅಫಜಲಪುರ ಮೂಲದವರಾಗಿದ್ದಾರೆ. ರಾಹುಲ ಮ್ಯಾಳಸಿ 25, ರಾಧಿಕಾ ರಾಹುಲ್ 22, ಗಿರಿಶ ಅಶೋಕ ಬಿಳ್ಳೂರಗಿ 28, ಸಂಗಮೇಶ ಗಿರೀಶ ಅಮರಗೂಂಡ 26 ಸಾವಣಪ್ಪಿದ್ದಾರೆ.
ಎಸ್ ಡಿ ಆರ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ವಿನಾಯಕ ಪ್ರಸಾಸ ತಿವಾರಿ (30) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ಘಟನೆ ನಡೆದಿದೆ. ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.


