ಅಥಣಿ : ಜಡ್ಜ್ ಎದುರಲ್ಲೇ ಮಹಿಳೆ ಕೊಲೆಗೆ ಯತ್ನ ; ಆರೋಪಿ ಬಂಧನ
ಅಥಣಿ : ಕೋರ್ಟ್ ಕಲಾಪ ನಡೆಯುವ ವೇಳೆ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಅಥಣಿ ನ್ಯಾಯಾಲಯದಲ್ಲಿ ನಡೆದಿದೆ.
ಮೀನಾಕ್ಸಿ ರಾಮಚಂದ್ರ ಶಿಂಧೆ ( 50 ) ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೋತನಟ್ಟಿ ಗ್ರಾಮದ ಬಾಬಾಸಾಹೇಬ್ ಚೌಹಾನ್ ಎಂಬಾತ ಹಲ್ಲೆ ಮಾಡಿದ್ದ ಆರೋಪಿ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಬಾಬಾಸಾಹೇಬ್ ಸೋದರತ್ತೆ ಮೀನಾಕ್ಸಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೇ ವಿಚಾರವಾಗಿ ಅನೇಕ ಬಾರಿ ಜಗಳವಾಗಿತ್ತು. ಇವತ್ತು ಮಹಿಳೆ ಬೆನ್ನಟ್ಟಿದ ವ್ಯಕ್ತಿ ಕೊಲೆಗೆ ಯತ್ನಿಸಿದ್ದಾನೆ.
ಕುಡುಗೋಲಿನಿಂದ ಮಹೆಳೆ ಮೇಲೆ ಹಲ್ಲೆಗೆ ಯತ್ನಿಸಿದ್ದವೇಳೆ ತಪ್ಪಿಸಿಕೊಳ್ಳಲು ಮಹಿಳೆ ಕೋರ್ಟ್ ಹಾಲ್ ಗೆ ನುಗ್ಗಿದ್ದಾಳೆ.
ಪ್ರಧಾನ ದಿವಾನಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಘಟನೆ ನಡೆದಿದ್ದು ಕ್ಷಣಕಾಲ ಆತಂಕದ ವಾತಾವರಣ ಮನೆಮಾಡಿತ್ತು.
ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.


