ಅಥಣಿ : ಅಡಹಳ್ಳಟ್ಟಿ ಗ್ರಾಮದ 7 ಯುವಕರು ಭಾರತೀಯ ಸೇನೆಗೆ ಆಯ್ಕೆ
ಅಥಣಿ : ಒಂದೇ ಗ್ರಾಮದ ಏಳು ಜನ ಯುವಕರು ಭಾರತೀಯ ಸೇನೆಯ ಅಗ್ನಿವೀರರಾಗಿ ಆಯ್ಕೆಯಾಗುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದ 7 ಯುವಕರು ಭಾರತೀಯ ಸೇನೆಯ ಅಗ್ನಿಪಥ ಯೋಜನೆ ಭಾಗವಾದ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ಗಂಗಾಧರ ಕಡೆನ್ನವರ, ಆಕಾಶ ಸಾತನ್ನವರ, ರಾಕೇಶ್ ಜಂಬಗಿ, ಅಭಿಷೇಕ್ ಸನದಿ, ಅಭಿಷೇಕ್ ತಾಂವಶಿ, ಭೀಮು ನಾಯಿಕ ಹಾಗೂ ಅಕ್ಷಯ್ ಹಿಪ್ಪರಗಿ ಆಯ್ಕೆಯಾದ ಯುವಕರು.
ಯುವಕರ ಸಾಧನೆಗೆ ಗ್ರಾಮದ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆಯ್ಕೆಯಾದವರಿಗೆ ಸನ್ಮಾನಿಸಲಾಗಿದೆ.


