ಸೆ. 30 ಕ್ಕೆ ಬೆಳಗಾವಿಯಲ್ಲಿ ಶ್ರೀ ಅಭಿಮನ್ಯುಜಿ ಅವರ ಶಿಬಿರ
ಬೆಳಗಾವಿ : ಜನರನ್ನು ರೋಗ ಮತ್ತು ದುಃಖದಿಂದ ಮುಕ್ತಗೊಳಿಸುವುದು ಮತ್ತು ಅವರಿಗೆ ಧ್ಯಾನ, ಜ್ಞಾನ, ಮೋಕ್ಷ, ಆಧ್ಯಾತ್ಮಿಕತೆ ಮತ್ತು ಜೀವನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಿರಂತರ ಆಧ್ಯಾತ್ಮಿಕ ಶಿಬಿರ ನಡೆಸಿ ಪ್ರಖ್ಯಾತಿ ಪಡೆದಿರುವ ಶ್ರೀ ಅಭಿಮನ್ಯುಜಿ ಸೆಪ್ಟೆಂಬರ್ 30 ಕ್ಕೆ ಬೆಳಗಾವಿಯಲ್ಲಿ ಶಿಬಿರ ಆಯೋಜಿಸಿದ್ದಾರೆ.
ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 01 ರ ವರೆಗೆ ಬೆಳಗಾವಿ ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಮುಂಜಾನೆ ಆಧ್ಯಾತ್ಮಿಕ ಸಮುಪದೇಶನ ಶಿಬಿರ ಹಾಗೂ ಶ್ತೀ ಅಭಿಮನ್ಯು ರವರ ದರ್ಶನ ಹಾಗೂ ಆಶಿರ್ವಚನ,“ ಮನಸ್ವಾಸ್ತ ಎಲ್ಲಿಗೆ, ರೋಗ ನಿವಾರಣಾ ಅಲ್ಲಿಗೆ ” ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಅಭಿಮನ್ಯುಜಿ ಅವರು ಕ್ಲಿನಿಕಲ್ ಸೈಕಾಲಜಿಯಲ್ಲಿ ತತ್ವಶಾಸ್ತ್ರದ ಮಾಸ್ಟರ್ ಮತ್ತು ಡಾಕ್ಟರ್ ಆಫ್ ಫಿಲಾಸಫಿ ಅಧ್ಯಯನ ಮಾಡಿದ್ದು, ಜನರನ್ನು ರೋಗ ಮತ್ತು ದುಃಖದಿಂದ ಮುಕ್ತಗೊಳಿಸುವುದು ಮತ್ತು ಅವರಿಗೆ ಧ್ಯಾನ, ಜ್ಞಾನ, ಮೋಕ್ಷ, ಆಧ್ಯಾತ್ಮಿಕತೆ ಮತ್ತು ಜೀವನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಿರಂತರ ಆಧ್ಯಾತ್ಮಿಕ ಶಿಬಿರ ಆಯೋಜಿಸುವ ಇವರು, ಸಧ್ಯ ಬೆಳಗಾವಿಯಲ್ಲಿ ತಮ್ಮ ಶಿಬಿರ ಹಮ್ಮಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಸನ್ನ ಘೋಟಗೆ , 9993399941 ಹಾಗೂ 8839906161 ಸಂಪರ್ಕಿಸಬಹುದಾಗಿದೆ.


