ಬೆಳಗಾವಿ : ರಾಜ್ಯದಲ್ಲಿ ಒಮ್ಮೆ ಮಹಿಳೆಯರಿಗೆ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ ಎಂದು ಕೋಡಿಮಠದ ಡಾ ಶಿವಾನಾಂದ ಸ್ವಾಮೀಜಿ  ಭವಿಷ್ಯ ನುಡಿದಿದ್ದಾರೆ.

ಬೆಳಗಾವಿ ರಾಮತೀರ್ಥ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಬಗ್ಗೆ ಈಗ ಏನೂ ಹೇಳುವುದಿಲ್ಲ. ಆದರೆ ಸರಕಾರಕ್ಕೆ ತೊಂದರೆ ಇಲ್ಲ. ಮುಂದೊಂದು ದಿನ ಮಹಿಳೆರಿಗೆ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ ಎಂದರು.

ಶಾಸಕರ ಪಕ್ಷಾಂತರ ಪರ್ವದ ಬಗ್ಗೆ ಈ ಹಿಂದೆಯೇ ಮುನ್ಸೂಚನೆ ನೀಡಿದ್ದೆ. ಅದರಂತೆ ಆಗುತ್ತಿದೆ. ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲವಾಗಲಿದೆ ಎಂದು ಹೇಳಿದ್ದೆ ಈಗ ಅದು ಅಸ್ಥಿರತೆ ಉಂಟಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.